ಬೆಂಗಳೂರು : ಮುಂಬರುವ ಎರಡು ವರ್ಷದಲ್ಲಿ ನಿವೇಶನ ರಹಿತರಿಗೆ ಮನೆ ಒದಗಿಸುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಶಿವಮೊಗ್ಗ ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಯಾರಿಗೆಲ್ಲಾ ನಿವೇಶನ ಇಲ್ಲವೋ ಅವರೆಲ್ಲರೂ ಹೌಸಿಂಗ್ ಬೋರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿ ನಿವೇಶನ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ದೇಶದ ಪ್ರತಿ ಪ್ರಜೆಯೂ ಮನೆ ಹೊಂದಿರಬೇಕು ಅನ್ನುವುದು ಪ್ರಧಾನಿ ಮೋದಿಯವರ ಕನಸು, ಹೀಗಾಗಿ ಮುಂದಿನ ಎರಡು ವರ್ಷದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಉದ್ದೇಶಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸೂರಿಲ್ಲದ ಕುಟುಂಬಗಳೇ ಇರಬಾರದು ಅನ್ನುವುದು ಸರ್ಕಾರದ ಗುರಿ. ಇದನ್ನು ಸಾಧಿಸಲು ಎರಡು ವರ್ಷಗಳ ಗುರಿ ಹೊಂದಲಾಗಿದೆ ಅಂದಿದ್ದಾರೆ.
ಯಡಿಯೂರಪ್ಪ ಮಾಡಿರುವ ಘೋಷಣೆ ತುಂಬಾ ಚೆನ್ನಾಗಿದೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವೇ ಅನ್ನುವುದು ಪ್ರಶ್ನೆ. ಬೆಂಗಳೂರಿನಲ್ಲಿ ನಿವೇಶನ ಒದಗಿಸಲು ಇರುವ ಬಿಡಿಎ ಅನ್ನುವ ಸಂಸ್ಥೆ ಭ್ರಷ್ಟಚಾರದ ಕೂಪವಾಗಿ ಕೂತಿದೆ. ಅದನ್ನು ಇನ್ನೂ ಸರಿ ಹಾದಿಗೆ ತರುವ ಮುಖ್ಯಮಂತ್ರಿ ಬಂದಿಲ್ಲ.
ಹೌಸಿಂಗ್ ಬೋರ್ಡ್ ಅನ್ನುವುದು ಕೂಡಾ ಇದಕ್ಕಿಂತ ಹೊರತಲ್ಲ. ಹೀಗಾಗಿ ಸರ್ವರಿಗೆ ನಿವೇಶನ ಸಿಗಬೇಕು ಅನ್ನುವುದಾದರೆ ಮೊದಲು ಹೌಸಿಂಗ್ ಬೋರ್ಡ್ ಅನ್ನು ಕ್ಲೀನ್ ಮಾಡಬೇಕು. ಆಗ ಸರ್ವರಿಗೂ ಸೂರು ಖಂಡಿತಾ ಸಿಗುತ್ತದೆ. ಅಧಿಕಾರ ಬಿಟ್ಟು ಹೋಗುವ ಸಂದರ್ಭದಲ್ಲಿ ಉತ್ತಮ ಯೋಜನೆಯೊಂದನ್ನು ಜಾರಿಗೊಳಿಸದ ಹಿರಿಮೆಯೂ ಯಡಿಯೂರಪ್ಪ ಅವರದ್ದಾಗುತ್ತದೆ. ಈ ಮೂಲಕ ಇತಿಹಾಸದ ಪುಟದಲ್ಲಿ ಯಡಿಯೂರಪ್ಪ ಹೆಸರು ಶಾಶ್ವತವಾಗುತ್ತದೆ.
Discussion about this post