ವೀರಪ್ಪನ್ ಬಾಹುಗಳಿಂದ ರಾಜ್ ಕುಮಾರ್ ಅವರನ್ನು ಬಿಡುಗೊಳಿಸುವಲ್ಲಿ ಸಿದ್ದಾರ್ಥ್ ಪಾತ್ರ….?
ಬ್ಯಾಕ್ ಸಪೋರ್ಟ್ ಏನು ಬೇಕು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಂತಹ ವ್ಯಕ್ತಿ ಸಿದ್ದಾರ್ಥ್. ಅವತ್ತು ಸಿದ್ದಾರ್ಥ್ ಪಾತ್ರ ಇಲ್ಲ ಅಂತಿದ್ರೆ ಅಣ್ಣಾವ್ರನ್ನ ಕರೆದುಕೊಂಡು ಬರ್ತಾ ಇರೋದು ಸಲೀಸು ಆಗ್ತಾ ಇರಲಿಲ್ಲ ಅನ್ನುವ ಮಾತುಗಳು ಕೇಳಿ ಬರುತ್ತೆ. ಆ ಮಟ್ಟಿಗೆ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಸಾಥ್ ಕೊಟ್ಟಿದ್ದರು.
ಇದು ಪಬ್ಲಿಕ್ ಟಿವಿ ಪ್ರಸಾರ ಮಾಡಿದ ಸುದ್ದಿ.
ಸಾವಿರಾರು ಕನ್ನಡಿಗರಿಗೆ ಕೆಲಸ ಕೊಟ್ಟ ಉದ್ಯಮಿ, ಬಡವರ ಪಾಲಿಗೆ ಸ್ಪಂದಿಸಿದ ಸ್ನೇಹ ಜೀವಿ, ಸಂಕಷ್ಟದಲ್ಲಿದವರ ಪಾಲಿನ ಸಂಜೀವಿನಿ ಹಿಂದೊಮ್ಮೆ ತಪ್ಪು ಮಾಡಿದ್ರ ಅನ್ನುವ ಸಂಶಯವನ್ನು ಈ ವಿಡಿಯೋ ಮೂಡಿಸಿದೆ.
ರಾಜ್ ಕುಮಾರ್ ಅಪಹರಣ ಮತ್ತು ಅವರ ಬಿಡುಗಡೆ ಸಂದರ್ಭದಲ್ಲಿ ಸಿದ್ದಾರ್ಥ್ ಹೆಸರು ಪ್ರಸ್ತಾಪವಾಗಿರಲಿಲ್ಲ. ಆದರೆ ಇದೀಗ ಸಿದ್ದಾರ್ಥ್ ಸಾವಿನ ನಂತರ ಅವರ ಹೆಸರನ್ನು ಪಬ್ಲಿಕ್ ಟಿವಿ ಹಾಗೂ ಸುವರ್ಣ ಸೇರಿದಂತೆ ಕನ್ನಡದ ಅನೇಕ ಸುದ್ದಿ ವಾಹಿನಿಗಳು ಪ್ರಸ್ತಾಪಿಸುತ್ತಿದೆ. ಇದೊಂದು ಸಮೂಹ ಸನ್ನಿ ಸುದ್ದಿಯಂತೆ ಗೋಚರಿಸುತ್ತಿದೆ. ಯಾಕಂದರೆ ಸಿದ್ದಾರ್ಥ್ ಅಂದು ಮಾಡಿದ ಕೆಲಸವೇನು ಅನ್ನುವುದನ್ನು ಯಾರೊಬ್ಬರೂ ಹೇಳುತ್ತಿಲ್ಲ.
ರಾಜ್ ಕುಮಾರ್ ಬಿಡುಗಡೆಯಲ್ಲಿ ಅವರ ಪಾತ್ರವಿದೆ ಅನ್ನುವುದನಷ್ಟೇ ಸುದ್ದಿ ಮಾಧ್ಯಮಗಳು ಹೇಳುತ್ತಿದೆ. ಹಾಗಾದರೆ ಕರ್ನಾಟಕದ ನೆಚ್ಚಿನ ನಾಯಕ ಬಿಡುಗಡೆಯಾಗಿದ್ದು ಹೇಗೆ. ಸುದ್ದಿ ನೋಡಿದರೆ ಈ ವಾಹಿನಿಗಳಿಗೆ ಸತ್ಯದ ಅರಿವಿರುವ ಹಾಗಿದೆ.
Discussion about this post