ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು, ಅವರು ಸಿಎಂ ಆಗ್ತಾರೆ ಅನ್ನುವ ಮಾತುಗಳನ್ನು ಅವರ ಬೆಂಬಲಿಗರು ಪದೇ ಪದೇ ಹೇಳುತ್ತಿದ್ದರು.
ಇದೀಗ ಕುಮಾರಸ್ವಾಮಿ ಮಾಜಿಯಾಗಿದ್ದಾರೆ, ಯಡಿಯೂರಪ್ಪ ಸಿಎಂ ಕುರ್ಚಿ ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಕನಸು ಪ್ರಾರಂಭವಾಗಿದೆ.
ಈ ಸಂಬಂಧ ಸಿದ್ದರಾಮಯ್ಯ ಅವರೇ ಮಾತನಾಡಿದ್ದು, ಈ ಸಲ ಕೈ ಬಿಟ್ರಿ, ಮುಂದಿನ ಸಲ ಕೈ ಹಿಡಿಯಿರಿ ಅಂದಿದ್ದಾರೆ.
ಕೊಳ್ಳೆಗಾಲದಲ್ಲಿ ಮಾತನಾಡಿದ ಅವರು, ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಅಂದುಕೊಂಡಿದ್ದೆ ಆದರೆ ನನ್ನ ಮೇಲೆ ಕೆಲವರಿಗೆ ಅಸೂಯೆ, ಅಸೂಯೆಗೆ ಮದ್ದಿಲ್ಲ. ಹೀಗಾಗಿ ಕೆಲವರು ನನ್ನ ಸಿಎಂ ಆಗದಂತೆ ನೋಡಿಕೊಂಡರು.
ಸಿದ್ದರಾಮಯ್ಯ ಧರ್ಮ ಒಡೆದರು ಅಂದರು. ಸಿದ್ದರಾಮಯ್ಯ ಆ ಜಾತಿ ವಿರೋಧಿ, ಈ ಜಾತಿ ವಿರೋಧಿ, ಆ ಧರ್ಮದ ವಿರೋಧಿ, ಈ ಧರ್ಮದ ವಿರೋಧಿ ಅಂದರು. ಆದರೆ ನಾನು ಮನುಷ್ಯತ್ವದಲ್ಲಿ ನಂಬಿಕೆ ಇಟ್ಟಿರುವ ಮನುಷ್ಯ.
ಈ ಸುಳ್ಳು ಆರೋಪಗಳಿಂದಲೇ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. 5 ವರ್ಷ ಒಳ್ಳೆಯ ಕೆಲಸ ಮಾಡಿದ್ದೇನೆ, ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿತ್ತು. ಭ್ರಷ್ಟಚಾರದ ಆರೋಪ ನನ್ನ ಮೇಲಿರಲಿಲ್ಲ.
Get upto 70% off on Beardo Thunder Sale
ಎಲ್ಲಾ ಧರ್ಮದ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದೆವು.ಆರು ಕೋಟಿ ಜನರಿಗೆ ನ್ಯಾಯ ಕೊಟಿದ್ದೇವೆ. ಆದರೂ ಅಪಪ್ರಚಾರ ಮಾಡಿದರು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಮಾತುಗಳನ್ನು ಕೇಳಿದರೆ ಅವರು ಹೇಳಿರುವುದರಲ್ಲಿ ಸತ್ಯವಿದೆ. ಸಿದ್ದರಾಮಯ್ಯ ಕೊಟ್ಟ ಯೋಜನೆಗಳು ಉತ್ತಮವಾಗಿತ್ತು. ಆದರೆ ಅದು ಅಧಿಕಾರಿಗಳ ಮತ್ತು ಸಚಿವರ ಸೋಮಾರಿತನದಿಂದ ಜಾರಿಯಾಗಲಿಲ್ಲ. ಜೊತೆಗೆ ಸಂಪುಟ ಸಚಿವರ ಮಾತು ಕೇಳಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿ ಮಾಡಿರುವ ಒಳ್ಳೆ ಕೆಲಸಗಳನ್ನು ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತೆ ಮಾಡಿದ್ದು ಇತಿಹಾಸ.
Get Flat 67% off on All Beardo Dark Side Perfume
ಇನ್ನು ಕಾಂಗ್ರೆಸ್ ವರಿಷ್ಠರು ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಅವರನ್ನು ಮೈತ್ರಿ ಸರ್ಕಾರದಲ್ಲಿ ಮತ್ತೊಂದು ಅವಧಿಗೆ ಸಿಎಂ ಮಾಡಬಹುದಿತ್ತು. ಆದರೆ ಅದಕ್ಕೆ ದೇವೇಗೌಡರು ಸಮ್ಮತಿಸುತ್ತಿದ್ದರೋ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.
Discussion about this post