ಬೆಂಗಳೂರು : ಇಡೀ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿರುವ ಚೈನಾ ವೈರಸ್ ಅನ್ನು ಸೋಲಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯಗಳು ನಡೆಯುತ್ತಿದೆ. ಈಗಾಗಲೇ ಕೆಲ ರಾಷ್ಟ್ರಗಳು ಲಸಿಕಾ ಕಾರ್ಯಕ್ರಮವನ್ನು ಸರಿಯಾಗಿ ಜಾರಿಗೊಳಿಸಿದ ಕಾರಣ ಸೋಂಕಿನ ಅಬ್ಬರದ ವಿರುದ್ಧ ಒಂದಿಷ್ಟು ಗೆಲುವು ಸಾಧಿಸಿದೆ.
ಆದರೆ ಭಾರತದ ಪಾಲಿಗೆ ಲಸಿಕೆ ವಿರುದ್ಧ ನಡೆಯುತ್ತಿರುವ ಅಪಪ್ರಚಾರವೇ ದೊಡ್ಡ ಶತ್ರುವಾಗಿದೆ. ಲಸಿಕೆ ತೆಗೆದುಕೊಳ್ಳುವಂತೆ ಸರ್ಕಾರ ಕೈ ಮುಗಿದು ಪ್ರಾರ್ಥಿಸಿದರೂ ಪ್ರಯೋಜನವಾಗಿಲ್ಲ. ಮೊದಲ ಹಂತದಲ್ಲೇ ಜನ ಲಸಿಕೆಯನ್ನು ಪಡೆಯುತ್ತಿದ್ರೆ ಎರಡನೆ ಅಲೆ ಈ ಮಟ್ಟಿಗೆ ಸಮಸ್ಯೆ ಸೃಷ್ಟಿಸುತ್ತಿರಲಿಲ್ಲ. ಇದೀಗ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದಂತೆ ಸರ್ವರೂ ಲಸಿಕೆಗಾಗಿ ಮುಗಿ ಬೀಳುತ್ತಿದ್ದಾರೆ.
ಕೆಲವರು ವಾಟ್ಸಾಪ್ ಯೂನಿವರ್ಸಿಟಿಯ ಮಾತು ಕೇಳಿ ಕೆಟ್ರೆ, ಮತ್ತೆ ಕೆಲವರು ಮೋದಿಯ ಮೇಲಿನ ಕೋಪಕ್ಕೆ ಲಸಿಕೆ ತೆಗೆದುಕೊಳ್ಳಲಿಲ್ಲ. ಅವರು ಲಸಿಕೆ ತೆಗೆದುಕೊಳ್ಳದೆ ಬೇರೆಯವರನ್ನೂ ಸಮಸ್ಯೆಗೆ ಈಡು ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಪ್ರಧಾನಿ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಅದು ನಿಮ್ಮ ವೈಯಕ್ತಿಕ. ಹಾಗಂತ ಅದನ್ನು ಬಿಟ್ಟು ಲಸಿಕೆ ಹಾಕಿಕೊಳ್ಳದೆ ಮೂರ್ಖತನ ತೋರಿಸಬೇಡಿ ಅಂದಿದ್ದಾರೆ.
ನನಗೊಂದು ಕರೆ ಬಂದಿತ್ತು. ಹಳ್ಳಿಯಿಂದ ಒಬ್ಬರು ಫೋನ್ ಮಾಡಿ ಮಾತನಾಡುತ್ತಿದ್ದರು. ಹಳ್ಳಿಯಲ್ಲಿ ಕೊರೋನಾದಿಂದ ಸಾಕಷ್ಟು ಜನ ಸಾಯುತ್ತಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಅಂತಾ.
ಹಳ್ಳಿಯವರೆಲ್ಲಾ ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿರುದ್ಧ ಇದ್ದಾರಂತೆ. ಹೀಗಾಗಿ ಮೋದಿ ಕೊರೋನಾ ಕೊಡುತ್ತಿರುವ ಲಸಿಕೆ ಹಾಕಿಸಿಕೊಳ್ಳೋದು ಇವರಿಗೆ ಬ್ಯಾಡವಂತೆ. ಮೋದಿ ಸರ್ಕಾರ ಲಸಿಕೆ ಕೊಡುತ್ತಿರುವ ಕಾರಣ ಯಾರೂ ಲಸಿಕೆ ಹಾಕಿಸಿಕೊಂಡಿಲ್ಲವಂತೆ. ಪ್ರಧಾನಿ ಮೋದಿ ಅಥವಾ ಬಿಜೆಪಿಯನ್ನು ದ್ವೇಷಿಸುವುದು ನಿಮ್ಮ ವೈಯಕ್ತಿಕ ವಿಚಾರ. ನೀವು ಯಾರನ್ನ ಬೇಕಾದರೂ ದ್ವೇಷಿಸಿ ಆದರೆ ದಯವಿಟ್ಟು ಲಸಿಕೆ ತೆಗೆದುಕೊಳ್ಳಿ ಎಂದು ಶ್ವೇತಾ ಮನವಿ ಮಾಡಿದ್ದಾರೆ.
Discussion about this post