ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಒಬ್ಬ ಭ್ರಷ್ಟ ಸನ್ಯಾಸಿ ಅವರು ಮಠಾಧೀಶರೇ ಅಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದರು.
ಜೊತೆಗೆ ಶೀರೂರು ಶ್ರೀಗಳ ಸಾವಿನ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಹೋಗಿರಲಿಲ್ಲ.ಮಠಾಧೀಶರಿಗೆ ಬೇರೆ ಮಠಾಧೀಶರು ನಿಧನರಾದ ವೇಳೆ ಮುಖ ದರ್ಶನ ಮಾಡಲು ಅವಕಾಶವಿದೆ. ಆದರೆ ಮಠಾಧೀಶರಲ್ಲದವರು ನಿಧನ ಹೊಂದಿದ್ದರೆ ಮುಖ ದರ್ಶನಕ್ಕೆ ಅವಕಾಶವಿಲ್ಲ.
ಪೇಜಾವರ ಶ್ರೀಗಳು ಶೀರೂರು ಸ್ವಾಮೀಗಳನ್ನು ಮಠಾಧೀಶರೇ ಅಲ್ಲ ಎಂದಿದ್ದರು. ಆದರೂ ಸಮಾಧಿ ಬಳಿಕ ಅಂತಿಮ ಗೌರವ ಸಲ್ಲಿಸಿದ್ದರು.
ಇದೀಗ ಶೀರೂರು ಶ್ರೀಗಳ ಬಂಗಾರದ ವ್ಯಾಮೋಹ, ರಿಯಲ್ ಎಸ್ಟೇಟ್ ಉದ್ಯಮ ಪ್ರೇಮ ಬಹಿರಂಗವಾಗಿದೆ. ಮಾತ್ರವಲ್ಲದೆ ಹೆಣ್ಣು, ಹೆಂಡದ ಸಹವಾಸ, ಮಾನಿನಿ, ಮದಿರೆಯೇ ಸಾವಿಗೆ ಕಾರಣ ಅನ್ನುವುದು ಬಹಿರಂಗವಾಗಿದೆ.
ಈ ನಡುವೆ ಶೀರೂರು ಶ್ರೀಗಳಿಗೆ ವೃಂದಾವನ ನಿರ್ಮಿಸಬೇಕಾ ಅನ್ನುವ ಪ್ರಶ್ನೆ ಎದ್ದಿದೆ.ಸಂಪ್ರದಾಯದಂತೆ ಸಮಾಧಿ ಮಾಡಿದ ಜಾಗದಲ್ಲಿ 12 ನೇ ದಿನ ಆರಾಧನೆ ನೆರವೇರಿಸಿ ಕಲ್ಲಿನ ವೃಂದಾವನ ನಿರ್ಮಿಸುವುದು ಸಂಪ್ರದಾಯ.
ಆದರೆ ಬ್ರಹ್ಮಚರ್ಯ ಕಳೆದುಕೊಂಡ, ಸನ್ಯಾಸಿಯೇ ಆಗಿರದ ಶೀರೂರು ಶ್ರೀಗಳಿಗೆ ಬೃಂದಾವನದ ಅಗತ್ಯವೇನಿದೆ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹೌದು ಶೀರೂರು ಶ್ರೀಗಳಿಗೆ ಮಠಾಧೀಶ, ಸ್ವಾಮೀಜಿ, ಸನ್ಯಾಸಿ ಅನ್ನುವ ಕಾರಣಕ್ಕೆ ಬೃಂದಾವನದ ಅಗತ್ಯವಿಲ್ಲ. ಬದಲಾಗಿ ಸಮಾಧಿಯೊಂದನ್ನು ನಿರ್ಮಿಸಿದರೆ ಸಾಕು. ಶ್ರೀಗಳು ಮಾಡಿದ ಒಳ್ಳೆಯ ಕಾರ್ಯಕ್ಕೆ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸುವುದು ಉತ್ತಮ.
ಬೃಂದಾವನ ನಿರ್ಮಿಸಿ ಉಡುಪಿ ಅಷ್ಟ ಮಠಗಳ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಕಾಣಿಸಿಕೊಂಡ ಘಟನೆಯನ್ನು ಶಾಶ್ವತವಾಗಿಸುವುದರಲ್ಲಿ ಅರ್ಥವಿಲ್ಲ. ಬದಲಾಗಿ ಎಲ್ಲಾ ಶ್ರೀಗಳಿಗೆ ಬೃಂದಾವನ ಭಾಗ್ಯ ಸಿಕ್ಕರೆ, ಇವರಿಗೆ ಸಮಾಧಿ ಭಾಗ್ಯ ಸಿಕ್ತು ಇದಕ್ಕೆ ಕಾರಣ ಮದಿರೆ, ಮಾನಿನಿಯ ಸಹವಾಸ ಅನ್ನುವ ಸಂದೇಶವೊಂದು ಮುಂದಿನ ಪೀಳಿಗೆಗೆ ಹೋದರೆ ಸಾಕು, ಕನಿಷ್ಠ ಮುಂದಿನ ಪೀಳಿಗೆ ಶ್ರೀಗಳೆಂದರೆ ಹೀಗಿರಬೇಕು ಅಂದುಕೊಳ್ಳುತ್ತಾರೆ.
ಶೀರೂರು ಶ್ರೀಗಳು ಸನ್ಯಾಸತ್ವಕ್ಕೆ ಮಾತ್ರವಲ್ಲ, ಮಾನವೀಯತೆಗೂ ಅವಮಾನ ಮಾಡಿದ ವ್ಯಕ್ತಿ. ತಮಗೊಂದು ಮಗುವಿದೆ ಎಂದು ಹೇಳಿದವರು, ಆ ಮಗುವನ್ನು ಸಮಾಜದಿಂದ ದೂರವಿಟ್ಟಿದ್ದಾರೆ ಅಂದ ಮೇಲೆ ಇದು ಅಮಾನವೀಯತೆ ತಾನೇ. ಅಂತಹ ವ್ಯಕ್ತಿಗೆ ಬೃಂದಾವನ ಕಟ್ಟಿ ಆರಾಧಿಸುವುದರಲ್ಲಿ ಅರ್ಥವೇನಿದೆ.
Discussion about this post