ಕನ್ನಡಿಗರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ.
ಇದೇ ಭಾನುವಾರ ಕಿಚ್ಚ ಸುದೀಪ್ ಪ್ರವೇಶದೊಂದಿಗೆ 8ನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.
ಸೀಸನ್ 8ರ ಪ್ರಾರಂಭಕ್ಕಿಂತ ಮುಂಚೆ ಈ ಹಿಂದಿನ ಸೀಸನ್ ಗಳ ವಿನ್ನರ್ ಗಳು ಏನು ಮಾಡುತ್ತಿದ್ದಾರೆ ಅನ್ನೋದನ್ನ ನೋಡಿದ್ರೆ ಹಲವು ಕುತೂಹಲಕಾರಿ ಅಂಶಗಳು ತಿಳಿಯುತ್ತದೆ.
ಶೈನ್ ಶೆಟ್ಟಿ
ಧಾರಾವಾಹಿಗಳ ಮೂಲಕ ಚಿರಪರಿಚಿತವಾಗಿದ್ದ ಶೈನ್ ಶೆಟ್ಟಿಯ ನಿಜ ಗುಣ ಗೊತ್ತಾಗಿದ್ದು ಸೀಸನ್ 7ರಲ್ಲಿ.
ಚಂದನವನದಲ್ಲಿ ನೆಲೆ ಕಾಣಬೇಕು ಅನ್ನುವ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಹೋದವರು ಹೊರ ಬಂದಿದ್ದು ಗೆಲುವಿನ ನಗೆಯೊಂದಿಗೆ.
ಆದರೆ ಬಿಗ್ ಬಾಸ್ ಗೆದ್ದು ಬಂದವರಿಗೆ ಚಂದನವನದಲ್ಲಿ ಅದ್ಭುತ ಅವಕಾಶಗಳು ಕಾದಿತ್ತು. ಆದರೆ ಕೊರೋನಾ ಅನ್ನುವ ಮಹಾಮಾರಿ ಶೈನ್ ಶೆಟ್ಟಿಯ ಎಲ್ಲಾ ಕನಸುಗಳಿಗೆ ತಣ್ಣೀರು ಎರಚಿದೆ. ಆದರೂ ಪರವಾಗಿಲ್ಲ ಒಂದಿಷ್ಟು ಪ್ರಾಜೆಕ್ಟ್ ಗಳು ಕೈಯಲ್ಲಿದೆ.
ಜೊತೆಗೆ ಎಂದಿನಂತೆ ಬದುಕು ಕಟ್ಟಿಕೊಟ್ಟ ಫುಡ್ ಟ್ರಕ್ ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದಿದೆ.
ಬಿಗ್ ಬಾಸ್ ಗೆಲುವಿನ ಕಾರಣದಿಂದ ಶೈನ್ ಶೆಟ್ಟಿಯವರ ಗಲ್ಲಿ ಕಿಚನ್ ಖದರ್ ಬದಲಾಗಿದ್ದು ಸುಳ್ಳಲ್ಲ.
ಶಶಿಕುಮಾರ್
ಬಿಗ್ ಬಾಸ್ ಸೀಸನ್ 6ರಲ್ಲಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದ ಮಾಡರ್ನ್ ರೈತ. ಸಿನಿಮಾದ ಬಗ್ಗೆ ದೊಡ್ಡ ಕನಸುಗಳಿರಲಿಲ್ಲ. ಕೃಷಿಯಲ್ಲೇ ಸಾಧನೆ ಮಾಡಬೇಕು, ಕೃಷಿಕರು ಅಂದ್ರೆ ಯಾರು ಅನ್ನುವುದನ್ನು ಪರಿಚಯಿಸಬೇಕು ಅನ್ನುವುದು ಅವರ ಉದ್ದೇಶವಾಗಿತ್ತು. ಅದನ್ನು ಅವರು ಸಾಧಿಸಿದ್ದಾರೆ ಕೂಡಾ.
ಕೃಷಿಯ ಜೊತೆಗೆ ಕೃಷಿಗೆ ಸಂಬಂಧ ಪಟ್ಟ ಉದ್ಯಮವೊಂದನ್ನು ನಡೆಸುತ್ತಿರುವ ಶಶಿ, ಚಂದನವನ ಪ್ರವೇಶಿಸಕ್ಕೆ ವೇದಿಕೆ ಸಿದ್ದ ಮಾಡಿಕೊಂಡಿದ್ದಾರೆ.
ಚಂದನ್ ಶೆಟ್ಟಿ
ಚಂದನ್ ಶೆಟ್ಟಿಗೆ ಬಿಗ್ ಬಾಸ್ ಮನೆಯಿಂದ ಏನು ಲಾಭವಾಯ್ತೋ ಗೊತ್ತಿಲ್ಲ, ನಿವೇದಿತಾ ಗೌಡ ಜೊತೆಗೆ ಮದುವೆಯಂತು ಆಯ್ತು.
ಬಿಗ್ ಬಾಸ್ ಮನೆಗೆ ಹೋಗುವ ಮುಂಚೆಯೇ ಸಾಕಷ್ಟು ಹೆಸರಿತ್ತು. ಬಿಗ್ ಬಾಸ್ ಮನೆಯಿಂದ ಪ್ರಶಸ್ತಿ ಗೆದ್ದು ಬಂದ ಮೇಲೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗಿ ಬಂತು.
ಪ್ರಸ್ತುತ ಸಾಕಷ್ಟು ಒಳ್ಳೊಳ್ಳೆ ಪ್ರಾಜೆಕ್ಟ್ ಗಳು ಕೈಯಲ್ಲಿದೆ. ಸಿನಿಮಾ ರಂಗದಿಂದಲೂ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ಜೊತೆಗೆ ಒಂದಿಷ್ಟು ಮ್ಯೂಸಿಕ್ ಪ್ರಾಜೆಕ್ಟ್ ಗಳಲ್ಲಿ ಚಂದನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಒಳ್ಳೆ ಹುಡುಗ ಪ್ರಥಮ್
ಬಿಗ್ ಬಾಸ್ ಅನ್ನುವ ಕಾರ್ಯಕ್ರಮ ಮುಗಿದರೂ ಪ್ರಥಮ್ ಅನ್ನುವ ಹೆಸರನ್ನು ಜನ ಮರೆಯಲು ಸಾಧ್ಯವಿಲ್ಲ. ಆ ಮಟ್ಟಿಗೆ ಹವಾ ಎಬ್ಬಿಸಿದ ಪ್ರತಿಭೆ.
ಸಿಕ್ಕಾಪಟ್ಟೆ ಪ್ರತಿಭಾವಂತನಾಗಿರುವ ಪ್ರಥಮ್ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಯಾವ ಸಿನಿಮಾಗಳು ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ.
ಊರಿಗೆ ಹೋಗ್ತಿನಿ, ಕೃಷಿ ಮಾಡ್ತೀನಿ, ಬೆಂಗಳೂರು ಬಿಡ್ತೀನಿ ಅನ್ನುತ್ತಿರುವ ಪ್ರಥಮ್ ಮತ್ತೆ ಹೊಸದೊಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ.
ಶೃತಿ
ಸೀಸನ್ 3 ರಲ್ಲಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದವರು ಸಿನಿಮಾ ನಟಿ ಶೃತಿ. ಬಿಗ್ ಬಾಸ್ ಮನೆಗೆ ಹೋಗಿ ಅವರು ಸಾಧಿಸಬೇಕಾಗಿರುವುದು ಏನೂ ಇರಲಿಲ್ಲ. ಶೃತಿ ಅನ್ನುವ ಹೆಸರು ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಕಾರಣ ಶೃತಿಯವರಿಗೆ ಬಿಗ್ ಬಾಸ್ ಮನೆಯಿಂದ ಅಂತಾ ನಿರೀಕ್ಷೆಗಳಿರಲಿಲ್ಲ.
ಪ್ರಸ್ತುತ ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಶೃತಿಯವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಕುಲ್ ಬಾಲಾಜಿ
ಸೀಸನ್ 2ರ ವಿನ್ನರ್, ಅಕುಲ್ ಕೂಡಾ ಅಷ್ಟೇ ಬಿಗ್ ಬಾಸ್ ಮನೆಗೆ ಯಾಕೆ ಹೋದೆ ಅಂದ್ರೆ ಕಾರಣಗಳಿರಲಿಲ್ಲ. ಆದರೆ ಅಕುಲ್ ಬಿಗ್ ಬಾಸ್ ಮನೆಗೆ ಹೋದ ಕಾರಣದಿಂದ ಅವರು ಪಟ್ಟ ಕಷ್ಟ. ಇಷ್ಟು ಎತ್ತರಕ್ಕೆ ಬೆಳೆದುದರ ಹಿಂದಿನ ಪರಿಶ್ರಮ ಎಲ್ಲವೂ ಕನ್ನಡಿಗರಿಗೆ ಗೊತ್ತಾಗಿದೆ.
ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ನಿರೂಪಕನಾಗಿ ತೊಡಗಿಸಿಕೊಂಡಿರುವ ಅಕುಲ್ , ಜೊತೆಗೆ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ
ಮೊದಲ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಅನ್ನುವ ಹೆಗ್ಗಳಿಕೆ ವಿಜಯ್ ರಾಘವೇಂದ್ರ ಅವರದ್ದು. ಈಗ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಂದಿನಂತೆ ತಮ್ಮ ಪ್ರೀತಿಯ ನಟನೆಯನ್ನೂ ಮುಂದುವರಿಸಿರುವ ವಿಜಯ್ ರಾಘವೇಂದ್ರ ಹೊಸ ಅವಕಾಶಗಳನ್ನು ಇನ್ನೂ ನಿರೀಕ್ಷಿಸುತ್ತಿದ್ದಾರೆ.
Discussion about this post