ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸರ್ಕಾರದ ಪಾಲಿಗೆ ಬಿಳಿಯಾನೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ರಾಜಕಾರಣಿಗಳ ಬೇಜಾವಬ್ದಾರಿಯಿಂದಾಗಿ ಸತತ ನಷ್ಟಕ್ಕೆ ಸಿಲುಕುತ್ತಿದೆ.
ನಿಗಮವನ್ನು ಲಾಭದಲ್ಲಿ ಕೊಂಡೊಯ್ಯುವ ಎಲ್ಲಾ ಅವಕಾಶಗಳಿದ್ದರೂ ನಷ್ಟದತ್ತ ಒಯ್ಯುವುದೇ ಆಗಿದೆ.
ಈ ನಡುವೆ ಕೊರೋನಾದಿಂದ ತತ್ತರಿಸಿರುವ ಬಿಎಂಟಿಸಿಯ ನಷ್ಟದ ಹೊರೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಹಣಕಾಸಿನ ಕೊರತೆ ಅನುಭವಿಸುತ್ತಿರುವ ಸಂಸ್ಥೆ ಇದೀಗ ನಿರ್ವಹಣೆಗಾಗಿ ಸಾಲದ ಮೊರೆ ಹೋಗಿದೆ.
ನಿಗಮವನ್ನು ಮುನ್ನಡೆಸುವ ಸಲುವಾಗಿ ಶಾಂತಿನಗರ ಬಸ್ ನಿಲ್ದಾಣವನ್ನೇ ಇದೀಗ ಅಡವಿಟ್ಟಿರುವ ಸಂಸ್ಥೆ 160 ಕೋಟಿ ರೂಪಾಯಿ ಸಾಲ ಪಡೆದಿದೆ. ಇದಕ್ಕಾಗಿ ತಿಂಗಳಿಗೆ 1.04 ಕೋಟಿ ಬಡ್ಡಿಯನ್ನು ಕೂಡಾ ಪಾವತಿಸಲಾಗುತ್ತಿದೆ.
ಕೊರೋನಾ ಬರುವ ಮುಂಚೆ ನಿಗಮದ ನಿರ್ವಹಣೆ ಹಾಗೂ ನೌಕರರ ವೇತನಕ್ಕೆ ಸರಿಹೊಂದುವಷ್ಟು ಆದಾಯ ಬರುತ್ತಿತ್ತು. ಆದರೆ ಲಾಕ್ ಡೌನ್ ಬಳಿಕ ಆದಾಯ ಸಂಪೂರ್ಣ ಕುಸಿದು ಹೋಗಿದ್ದು. ನಿಗಮ ಮುಚ್ಚುವ ಸ್ಥಿತಿ ತಲುಪಿದೆ.
ಈಗಾಗಲೇ ಹಲವು ಆಸ್ತಿಗಳನ್ನು ಅಡವಿಟ್ಟಿರುವ ನಿಗಮ, ಮುಂದೊಂದು ದಿನ ಬಸ್ ಗಳನ್ನು ಅಡವಿಡುವ ಪರಿಸ್ಥಿತಿಗೆ ಬಂದರೂ ಅಚ್ಚರಿ ಇಲ್ಲ.
Discussion about this post