ನವದೆಹಲಿ : ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಇಷ್ಟು ದಿನಗಳ ಕಾಲ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಅಂದ್ರೆ ನೂತನ ಕೃಷಿ ಕಾಯ್ದೆಯಲ್ಲಿ ಲೋಪವಿದೆ ಎಂದು ಅನೇಕರು ಹೇಳಿದ್ದರು.
ಆದರೆ ಯಾವಾಗ ಇಂದು ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತೋ, ರೈತರ ಹೋರಾಟ ಬೆಂಬಲಿಸಿದ್ದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅನ್ನದಾತ ಅನ್ನಿಸಿಕೊಂಡವರು ಈ ರೀತಿ ಹಿಂಸಾಚಾರಕ್ಕೆ ಇಳಿಯುತ್ತಾರೆ ಅಂದ್ರೆ ನಂಬಲು ಸಾಧ್ಯವಿಲ್ಲ ಅಂದಿದ್ದಾರೆ.
ಈ ನಡುವೆ ದೆಹಲಿ ಪ್ರತಿಭಟನೆಯ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ತೀವ್ರ ಟೀಕೆಗಳು ಕೂಡಾ ಕೇಳಿ ಬಂದಿದೆ.
ದೇಶದ ಜನತೆ ಹಿಂಸಾಚಾರದ ಪ್ರತಿಭಟನೆ ವಿರುದ್ಧ ಕಿಡಿ ಕಾರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ನಮಗೂ ಈ ಹಿಂಸಾಚಾರಕ್ಕೂ ಸಂಬಂಧವಿಲ್ಲ.
ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಇತ್ತು. ಕೆಲ ಸಮಾಜಘಾತುಕ ಶಕ್ತಿಗಳು ನಮ್ಮ ನಡುವೆ ಸೇರಿಕೊಂಡು ಈ ಹಿಂಸಾಚಾರ ನಡೆಸಿದ್ದಾರೆ ಅಂದಿದೆ.
Discussion about this post