ಬೆಂಗಳೂರು : ಚಿನ್ನಾಭರಣ ವ್ಯಾಪಾರಿಯೊಬ್ಬರ ಬೈಕ್ ಡಿಕ್ಕಿಯಲ್ಲಿದ್ದ 1 ಕೆಜಿಯ ಆಭರಣ ಬ್ಯಾಗ್ ಅಪಹರಿಸಿದ್ದ ಕಳ್ಳನನ್ನು ಪೊಲೀಸರು 400 ಕಿಮೀ ಚೇಸ್ ಮಾಡಿ ಬಂಧಿಸಿದ್ದಾರೆ.
ಚಿನ್ನಾಭರಣ ವ್ಯಾಪಾರಿ ಶಿವರಾಮ್, ಯಲಹಂಕ ಸಮೀಪದ ಚಿನ್ನಾಭರಣ ಅಂಗಡಿಗಳಿಗೆ ಅಭರಣ ಮಾರಾಟಕ್ಕೆ ತೆರಳಿದ್ದರು,
ಈ ವೇಳೆ ಮಾರ್ಗ ಮಧ್ಯೆ ಮೂತ್ರವಿಸರ್ಜನೆ ಸಲುವಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ನಿರ್ಜನ ಪ್ರದೇಶಕ್ಕೆ ತೆರಳಿದ್ದರು.
ಮೂತ್ರವಿಸರ್ಜನೆ ಮುಗಿಸಿ ಬಂದ್ರೆ ಬೈಕ್ ಡಿಕ್ಕಿಯಲ್ಲಿದ್ದ 1 ಕೆಜಿ 200 ಗ್ರಾಮ್ ಚಿನ್ನಾಭರಣ ನಾಪತ್ತೆಯಾಗಿತ್ತು.
ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿವರಾಮ್ ದೂರು ದಾಖಲಿಸಿದ್ದರು.
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಆಂಧ್ರಪ್ರದೇಶದ ಖದೀಮರ ಗ್ಯಾಂಗ್ ಕೆ ಆರ್ ಪುರಂ. ಹೊಸಕೋಟೆ, ಕೋಲಾರ ಮೂಲಕ ಅಂಧ್ರ ಪ್ರವೇಶಿಸಿರುವುದು ಗೊತ್ತಾಗಿದೆ.
ತಕ್ಷಣ ರಸ್ತೆ ಹಾಗೂ ಟೋಲ್ ಗೇಟ್ ನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡುತ್ತಾ ಸಾಗಿದ ಪೊಲೀಸರು ಕಳ್ಳನನ್ನು ಆಂಧ್ರದಲ್ಲಿ ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸರು ಕ್ರಮಿಸಿದ್ದು ಬರೋಬ್ಬರಿ 400ಕಿಮೀ ದೂರ.
ಬಂಧಿತನನ್ನು ಚೆಲ್ಲಾ ಪ್ರಭುದಾಸ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 24 ಮೌಲ್ಯದ 440 ಗ್ರಾಮ್ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದೇ ಗ್ಯಾಂಗ್ ನ ಲೀಡನ್ ಪೇಟಲ ಪ್ರತೀಶ್, ಚೆಲ್ಲಾ ಪ್ರಭುದಾಸನ ಸಹೋದರ ಚೆಲ್ಲಾ ಅಲೆಕ್ಸಾಂಡರ್ ತಲೆಮರೆಸಿಕೊಂಡಿದ್ದಾರೆ.
Discussion about this post