ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯ ತನಿಖೆ ಇದೀಗ ಒಂದು ಹಂತಕ್ಕೆ ಬಂದಿದೆ. ಕದಿರೇಶ್ ಸಹೋದರಿಯೇ ಈ ಕೊಲೆಯ ಸೂತ್ರಧಾರಿ ಎಂದು ಇದೀಗ ಬಯಲಾಗಿದೆ. ರೇಖಾ ಅವರ ರಾಜಕೀಯ ಏಳಿಗೆಯನ್ನು ಸಹಿಸದ ಮಾಲಾ, ಫ್ಲವರ್ ಗಾರ್ಡನ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಯಸಿದ್ದಳು. ಜೊತೆಗೆ ಮಗ, ಮಗಳು ಅಥವಾ ಸೊಸೆಯನ್ನು ಬಿಬಿಎಂಪಿ ಚುನಾವಣೆಗೆ ನಿಲ್ಲಿಸುವ ಬಗ್ಗೆಯೂ ಚರ್ಚೆಗಳು ನಡೆದಿತ್ತು. ಆದರೆ ರೇಖಾ ಕದಿರೇಶ್ ಮುಗಿಸದ ಹೊರತು ಇದೆಲ್ಲಾ ಸಾಧ್ಯವಿಲ್ಲ ಎಂದು ಪೀಟರ್ ಜೊತೆ ಕೈ ಜೋಡಿಸಿದ ಮಾಲಾ ಕೊಲೆ ಮಾಡಿಸಿದ್ದಾಳೆ.
ಈ ನಡುವೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಆರೋಪಿ ಪೀಟರ್,ರೇಖಾ ಕದಿರೇಶ್ ಗಂಡ ಕದಿರೇಶ್ ನನ್ನು ಕೊಲ್ಲಿಸಿದ್ದಾಳೆ ಅನ್ನುವ ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ.
ಈ ಹಿಂದೆ ಕದಿರೇಶ್ ಜೊತೆಗೆ ಆತ್ಮೀಯನಾಗಿದ್ದ ಪೀಟರ್, ಎಲ್ಲಾ ವ್ಯವಹಾರಗಳಲ್ಲಿ ಭಾಗಿದಾರನಾಗಿದ್ದ. ಕದಿರೇಶ್ ಹತ್ಯೆ ಬಳಿಕ ಪೀಟರ್ ಗೆ ಸಿಗುತ್ತಿದ್ದ ಎಲ್ಲಾ ಹಣಕಾಸಿನ ನೆರವು ನಿಂತು ಹೋಗಿತ್ತು. ಜೊತೆಗೆ ಫ್ಲವರ್ ಗಾರ್ಡ್ ನಲ್ಲಿ ನಡೆಸುತ್ತಿದ್ದ ಅಕ್ರಮ ಚಟುವಟಿಗಳಿನ್ನೂ ರೇಖಾ ಬೆಂಬಲಿಸುತ್ತಿರಲಿಲ್ಲ. ಹೀಗಾಗಿ ರೇಖಾ ಹಾಗೂ ಪೀಟರ್ ನಡುವೆ ದ್ವೇಷ ಬೆಳೆದಿತ್ತು.
ಇದೇ ಕಾರಣಕ್ಕಾಗಿ ಪೀಟರ್ ಹಾಗೂ ರೇಖಾ ನಡುವೆ ಜಗಳ ಕೂಡಾ ನಡೆದಿತ್ತು. ಆ ಸಂದರ್ಭದಲ್ಲಿ ನನ್ನ ಗಂಡನನ್ನೇ ನಾನು ಕೊಲ್ಲಿಸಿದ್ದೇನೆ, ಇನ್ನು ನೀನ್ಯಾವ ಲೆಕ್ಕ ಎಂದು ರೇಖಾ ಧಮ್ಕಿ ಹಾಕಿದ್ದಳಂತೆ. ಜೊತೆಗೆ ಕದಿರೇಶ್ ಹತ್ಯೆ ಆರೋಪಿಗಳಿಗೆ ರೇಖಾಳೇ ಜಾಮೀನು ಕೊಡಿಸಲು ಓಡಾಡುತ್ತಿದ್ದಳು ಅನ್ನುವುದು ಪೀಟರ್ ಸಂಶಯ. ಇದೇ ವಿಷಯವನ್ನು ಪೀಟರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ಪೊಲೀಸರ ಪ್ರಕಾರ ಇವೆಲ್ಲವೂ ಪೀಟರ್ ಕಟ್ಟು ಕಥೆ, ಪೀಟರ್ ನ ಬ್ರೈನ್ ವಾಶ್ ಮಾಡುವ ಸಲುವಾಗಿ ಮಾಲಾ ಪೀಟರ್ ತಲೆಗೆ ಇವೆಲ್ಲವನ್ನೂ ತುಂಬಿಸಿದ್ದಳು ಅನ್ನುತ್ತಾರೆ.
Discussion about this post