ಪೋಷಕ ಕಲಾವಿದರಾಗಿ ಗುರುತಿಸಿಕೊಂಡಿರುವ ರವಿ ಭಟ್ ಅವರ ಪುತ್ರಿ ಕೃಷ್ಣಾ ಸವರ್ಣ ದೀರ್ಘ ಸಂಧಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರವಿ ಭಟ್ ಖ್ಯಾತ ನಟಿ ವಿನಯಾ ಪ್ರಸಾದ್ ಅವರ ಸಹೋದರ.
ಈ ಹಿಂದೆ ಭಾವನಾ ಭಟ್ ಎಂಬ ಹೆಸರಿದ್ದ ಅವರು ಈಗ ಕೃಷ್ಣಾ ಆಗಿ ಬದಲಾಗಿದ್ದಾರೆ. ರಾಜಕುಮಾರ ಸಿನಿಮಾದಲ್ಲಿ ಪುನೀತ್ರಾಜ್ಕುಮಾರ್ ಜತೆ ನಟಿಸಿದ್ದ ಕೃಷ್ಣಾ ಸವರ್ಣ ದೀರ್ಘ ಸಂಧಿ’ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೂ ಮಾಡೆಲಿಂಗ್ ಮಾಡುತ್ತಿದ್ದ ಕೃಷ್ಣಾ ಆ್ಯಕ್ಟಿಂಗ್ ಮಾಡಬೇಕು ಎಂಬುದನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಪದವಿ ಮುಗಿದ ಮೇಲೆ ಕೃಷ್ಣಾ ಅವರಿಗೆ ಸೀರಿಯಲ್ಗಳಲ್ಲಿ ಅವಕಾಶಗಳು ಬರಲಾರಂಭಿಸಿತು. ಹೀಗಾಗಿ ತಂದೆ ತಾಯಿ ಹಾಗೂ ಅತ್ತೆ ವಿನಯ ಪ್ರಸಾದ್ ಸಲಹೆ ಮೇರೆಗೆ ಉಷಾ ಭಂಡಾರಿಯವರ ಆ್ಯಕ್ಟಿಂಗ್ ಕ್ಲಾಸ್ಗೆ ಕೃಷ್ಣಾ ಸೇರಿಕೊಂಡರು.
ನಟನಾ ಕಲಿಯೆ ಜೊತೆಗೆ ಒಂದಷ್ಟು ಸಿನಿಮಾ ಆಡಿಷನ್ಗಳಿಗೂ ಹೋಗುತ್ತಿದ್ದ ಅವರಿಗೆ ಸವರ್ಣದೀರ್ಘ ಸಂಧಿ ಸಿನಿಮಾದ ಆಡಿಷನ್ ಕೈ ಹಿಡಿಯಿತು.
ಇನ್ನು ಭಾವನಾ ಭಟ್ ಕೃಷ್ಣಾ ಆಗಿದ್ದು ಹೇಗೆ ಅಂದ್ರೆ, “ನನ್ನ ತಾತ ಅವರ ಹೆಸರು ಕೃಷ್ಣಾ ಭಟ್ ಅಂತ, ಅವರು ನಮ್ಮನ್ನು ಅಗಲಿ ಹೋದ ಮೇಲೆ ಅವರಿಗೆ ನನ್ನ ಕಡೆಯಿಂದ ಗೌರವ ಸೂಚಿಸುವ ಸಲುವಾಗಿ ನನ್ನ ತೆರೆಯ ಹೆಸರನ್ನು ಕೃಷ್ಣಾ ಎಂದು ಬದಲಾಯಿಸಿಕೊಂಡಿದ್ದೇನೆ” ಅನ್ನುತ್ತಾರೆ.
Discussion about this post