ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಸಿಡಿಕೋರರು ಎನ್ನಲಾದ ಆರೋಪಿಗಳಿಗೆ ಜಾಮೀನು ದೊರಕಿದ್ದು, ಎಸ್ಐಟಿ ವಿಚಾರಣೆಯನ್ನು ತೀವ್ರಗೊಳಿಸಿದೆ.
ಮೊನ್ನೆ ನರೇಶ್ ಗೌಡ ಹಾಗೂ ಶ್ರವಣ್ ರನ್ನ ವಿಚಾರಣೆಗೆ ಕರೆದಿದ್ದ ಅಧಿಕಾರಿಗಳು 5 ಗಂಟೆಗಳ ಕಾಲ ಡ್ರಿಲ್ ಮಾಡಿ ಕಳುಹಿಸಿದ್ದರು. ಇಂದು ಶ್ರವಣ್ ನನ್ನು ವಿಚಾರಣೆಗೆ ಕರೆದಿರುವ ಅಧಿಕಾರಿಗಳು ಮೊನ್ನೆ ನೀಡಿದ್ದ ಹೇಳಿಕೆಗೆ ಪೂರಕ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಇನ್ನು ಮೊನ್ನೆಯ ವಿಚಾರಣೆ ಸಂದರ್ಭದಲ್ಲಿ ಹಲವು ಸ್ಪೋಟಕ ಮಾಹಿತಿಗಳನ್ನು ಶ್ರವಣ್ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ನರೇಶ್ ಗೌಡ ಯುವತಿ ಪರಿಚಯ, ನ್ಯಾಯ ಕೇಳಿ ಬಂದಿದ್ದಳು, ಜಾರಕಿಹೊಳಿ ಕಡೆಯಿಂದ ಹಣ ಪಡೆದಿಲ್ಲ ಹೀಗೆ ಅಧಿಕಾರಿಗಳು ನಿರೀಕ್ಷೆ ಮಾಡಿದ್ದ ಉತ್ತರಗಳನ್ನು ನೀಡಿದ್ದರು.
ಆದರೆ ಶ್ರವಣ್ ಹೇಳಿಕೆಗಳು ಇದೀಗ ತನಿಖಾಧಿಕಾರಿಗಳಲ್ಲೇ ದಿಗಿಲು ಮೂಡಿಸಿದೆ.
ಹೊರಗಡೆ ಓಡಾಡುತ್ತಿರುವ ವಿಡಿಯೋದಲ್ಲಿ ಜಾರಕಿಹೊಳಿಯೇ ವಿಡಿಯೋ ಮಾಡಿ ಅಂತಾ ಹೇಳ್ತಾರೆ, ನೀವೇ ಇನ್ನೊಂದು ಸಲ ಕೇಳಿಸಿಕೊಳ್ಳಿ ಎಂದು ತನಿಖಾಧಿಕಾರಿಗಳಿಗೆ ಶ್ರವಣ್ ಹೇಳಿದ್ದಾರೆ ಎನ್ನಲಾಗಿದ್ದು, ಇದೇ ವಿಡಿಯೋ ಜಾರಕಿಹೊಳಿ ಮೊಬೈಲ್ ನಲ್ಲೂ ಇದೆ, ಬೇಕಿದ್ರೆ ಒಂದ್ಸಲ ಚೆಕ್ ಮಾಡಿ ಅಂದಿದ್ದಾರೆ.
ಯುವತಿಯನ್ನು ಬಲವಂತ ಮಾಡಿ, ಬೆದರಿಸಿ ರಮೇಶ್ ಜಾರಕಿಹೊಳಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ಸ್ಟಿಂಗ್ ಕ್ಯಾಮಾರದಲ್ಲಿ ವಿಡಿಯೋ ರೆಕಾರ್ಡ್ ಆಗುವ ಮೊದಲೇ ಮಂಚದಾಟದ ವಿಡಿಯೋ ರೆಕಾರ್ಡ್ ಆಗಿತ್ತು. ಆದರೆ ಯುವತಿಗೆ ಸ್ಟಿಂಗ್ ಕ್ಯಾಮಾರ ಕೊಡಿಸಿದ್ದು ನಾವೇ ಎಂದು ಶ್ರವಣ್ ಹೇಳಿದ್ದಾನಂತೆ.
ಸ್ಟಿಂಗ್ ಕ್ಯಾಮಾರದಲ್ಲಿ ವಿಡಿಯೋ ಆದ ಮೇಲೆ ನಾವು ನೋಡಿಲ್ಲ. ಅದರ ರಾ ಫೂಟೇಜ್ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೆ ಜಾರಕಿಹೊಳಿ ಕಡೆಯವರು ಬಂದು ಬೆದರಿಸಿ ಹೋಗಿದ್ದಾರೆ ಅಂದಿದ್ದಾರೆ.
Discussion about this post