ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಕಾಮಲೀಲೆಯ ಸಿಡಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಈ ಟ್ವಿಸ್ಟ್ ನಿಂದ ಸಿಡಿಯ ಮೂಲ ಹುಡುಕಿ ಹೊರಟಿರುವ ಎಸ್ಐಟಿ ತಂಡ ಕೂಡಾ ಒಂದು ಕ್ಷಣ ಗಾಬರಿಯಾಗಿದೆ.
ಒಂದು ಕಡೆ ಕಾಮಲೀಲೆ ವಿಡಿಯೋ ಪ್ರಕರಣ ಕುರಿತಂತೆ ರಮೇಶ್ ಜಾರಕಿಹೊಳಿ ತುಟಿ ಬಿಚ್ಚಿದ್ದಾರೆ. ಸಿಡಿ ಷಡ್ಯಂತ್ರ ರೂಪಿಸಿದವರನ್ನು ಬಿಡೋದಿಲ್ಲ ಎಂದು ಶಪಥ ಮಾಡಿದ್ದಾರೆ.
ಅತ್ತ ಜಾರಕಿಹೊಳಿ ಶಪಥ ಮಾಡುತ್ತಿದ್ದಂತೆ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಂತ್ರಸ್ಥ ಯುವತಿ, ಕೆಲಸ ಕೊಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ನನ್ನ ನಂಬಿಸಿದ್ದರು.
ಇದೀಗ ರಮೇಶ್ ಜಾರಕಿಹೊಳಿಯವರೇ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದೀಗ ಈ ವಿಡಿಯೋವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ವರ್ಮಾ ಕಮಿಷನ್ ಕೊಟ್ಟಿರುವ ಶಿಫಾರಸ್ಸು ಪ್ರಕಾರ ಯಾವುದೇ ಮಹಿಳೆ ಠಾಣೆಗೆ ಬಂದು ದೂರು ಕೊಡಲು ಸಾಧ್ಯವಿಲ್ಲ, ಪರಿಸ್ಥಿತಿಗಳು ಬೇರೆ ಬೇರೆಯದ್ದಾಗಿರುತ್ತಾರೆ.
ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲೇಬೇಕಿದೆ. ಒಂದು ವೇಳೆ ತನಿಖೆ ನಡೆಸಿಲ್ಲ ಅಂದ್ರೆ ಪೊಲೀಸರು ದೊಡ್ಡ ತಪ್ಪು ಮಾಡಿದಂತಾಗುತ್ತದೆ.
Discussion about this post