ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣದಲ್ಲಿ ಇದೀಗ ಮತ್ತೊಬ್ಬ ಯುವತಿಯ ಪಾತ್ರ ಇರುವುದು ಎಸ್ಐಟಿ ಪೊಲೀಸರಿಗೆ ಗೊತ್ತಾಗಿದೆ.
ಈ ಹಿನ್ನಲೆಯಲ್ಲಿ ಆ ಯುವತಿಗೆ ನೋಟೀಸ್ ಕೊಟ್ಟಿರುವ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಯುವತಿ ಕೋಲಾರ ಮೂಲದವಳಾಗಿದ್ದು, ಸಿಡಿ ಪ್ರಕರಣ ಕಿಂಗ್ ಪಿನ್ ನರೇಶ್ ಗೆ ಆತ್ಮೀಯಳು ಎಂದು ಗೊತ್ತಾಗಿದೆ.
ಈ ಹಿಂದೆ ಒಂದು ಸಲ ಕೋಲಾರ ಮೂಲದ ಯುವತಿಯನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಬಳಿಕ ಸಿಡಿ ಲೇಡಿ ಎಸ್ಐಟಿ ವಿಚಾರಣೆ ಹಾಜರಾಗುತ್ತಿದ್ದಂತೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದರು. ಕಿಂಗ್ ಪಿನ್ ಗೆ ಸಿಡಿ ಲೇಡಿ ಪರಿಚಯವಾಗಿದ್ದು ಹೇಗೆ ಅನ್ನುವುದನ್ನು ಕೇಳಿದಾಗ ಸಿಕ್ಕ ವಿವರವೇ ಬೇರೆಯಾಗಿತ್ತು.
ಈ ಹಿಂದೆ ಕೋಲಾರದ ಯುವತಿಯೇ ಕಿಂಗ್ ಪಿನ್ ನನ್ನು ಸಿಡಿ ಲೇಡಿ ಪರಿಚಯ ಮಾಡಿದ್ದು ಎನ್ನಲಾಗಿತ್ತು. ಆದರೆ ಸಂತ್ರಸ್ಥೆ ಹೇಳುವ ಪ್ರಕಾರ ಕಿಂಗ್ ಪಿನ್ ಪರಿಚಯವಾಗಿದ್ದು ಆಕೆಯ ಸ್ನೇಹಿತನ ಮೂಲಕ ಅನ್ನಲಾಗಿದೆ. ಹೀಗಾಗಿಯೇ ಕೋಲಾರದ ಯುವತಿಯನ್ನು ಮತ್ತೊಮ್ಮೆ ವಿಚಾರಣೆಗೆ ಕರೆದಿರುವ ಎಸ್ಐಟಿ ತಂಡ ಸ್ಪಷ್ಟ ಚಿತ್ರಣ ಪಡೆಯಲು ನಿರ್ಧರಿಸಿದೆ.
ಈ ನಡುವೆ ತಲೆಮರೆಸಿಕೊಂಡಿರುವ ಕಿಂಗ್ ಪಿನ್ ಗಳನ್ನು ಹಿಡಿಯಲು ಎಸ್ಐಟಿ ಹರಸಾಹಸಪಡುತ್ತಿದೆ.
Discussion about this post