ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ರಾಸ ಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ನಾಯಕರು ತಲೆ ತಗ್ಗಿಸಿ ನಿಂತಿದ್ದಾರೆ.
ಅಧಿಕಾರಕ್ಕೆ ಬರಬೇಕು ಅನ್ನುವ ಹಪಹಪಿಗೆ ಬಿದ್ದು ಎಂಥ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡೆವು ಎಂದು ಬೇಸರಗೊಂಡಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಜಾರಕಿಹೊಳಿಯವರ ಸಿಡಿ ಬಯಲಾಗಿರುವುದು ನಾಯಕರ ನಿದ್ದೆಗೆಡಿಸಿದೆ.
ಈ ನಡುವೆ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸಚಿವ ರಮೇಶ್, ರಾತ್ರಿ ಪ್ರತ್ಯಕ್ಷರಾಗಿದ್ದಾರೆ.
ಪ್ರತಿಯೊಂದೂ ಸುದ್ದಿ ಮಾಧ್ಯಮಗಳಿಗೆ ಪ್ರತ್ಯೇಕ ಸಂದರ್ಶನ ಕೊಟ್ಟಿರುವ ಅವರು, ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ, ನಾನು ವಿಡಿಯೋ ನೋಡಿಲ್ಲ, ನೋಡಿದವರು ಅದೊಂದು ಮಾರ್ಫಿಂಗ್ ವಿಡಿಯೋ ಅನ್ನುತ್ತಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಸೂಕ್ತ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಜೊತೆಗೆ ಈಗಾಗಲೇ ವಕೀಲರ ಜೊತೆಗೆ ಮಾತುಕತೆ ಮಾಡಿದ್ದು ಸೂಕ್ತ ಕಾನೂನು ಕ್ರಮದ ಬಗ್ಗೆಯೂ ನಿರ್ಧರಿಸುತ್ತೇನೆ ಅಂದಿದ್ದಾರೆ.
ಇನ್ನು ದೆಹಲಿಗೆ ಹೋಗುವುದಾಗಿ ತಿಳಿಸಿರುವ ಜಾರಕಿಹೊಳಿ, ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿಯಲ್ಲಿ ಸರ್ಕಸ್ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ.
ಇನ್ನು ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ರಾಜೀನಾಮೆ ನೀಡುವ ಬಗ್ಗೆ ಏನೂ ಹೇಳಿಲ್ಲ.
ನಮ್ಮ ಮನೆತನ ದೊಡ್ಡ ಮನೆತನ, ರಾಜಕೀಯ ನಮಗೆ ದೊಡ್ಡದಲ್ಲ, ಮನೆತನದ ಮರ್ಯಾದೆ ಮುಖ್ಯ. ಹೀಗಾಗಿ ಅದು ನನ್ನ ವಿಡಿಯೋ ಅಲ್ಲ, ಆ ಹುಡುಗಿ ಬಗ್ಗೆಯೂ ನನಗೆ ಗೊತ್ತಿಲ್ಲ ಅಂದಿದ್ದಾರೆ.
Discussion about this post