ಬೆಂಗಳೂರು : ಜಾರಕಿಹೊಳಿ ಸಿಡಿ ರಹಸ್ಯ ಬೇಧಿಸಲು ಮುಂದಾಗಿರುವ ಎಸ್ಐಟಿ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ.
ಈ ತನಿಖೆಯಿಂದ ಕೊನೆಗೆ ಏನಾಗಲಿದೆ ಅನ್ನುವುದೇ ಯಕ್ಷ ಪ್ರಶ್ನೆಯಾದರೂ, ಈಗಿನ ಪರಿಸ್ಥಿತಿಯಲ್ಲಿ ಸಿಡಿ ರಹಸ್ಯದ ತುಣುಕುಗಳು ಬಯಲಾಗಲಿದೆ.
ಎಸ್ಐಟಿ ರಚನೆಯಾದ ಒಂದೇ ದಿನಕ್ಕೆ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗಿದ್ದು, 5 ಜನರನ್ನು ವಿಚಾರಣೆಗೆ ಕರೆಸಲಾಗಿದೆ.
ಆದರೆ ಜಾರಕಿಹೊಳಿ ಸಹೋದರರು ಹೇಳಿರುವ 2+4+3 ಬಳಗದ ಸದಸ್ಯರು ಈ ಐವರಲ್ಲಿ ಸೇರಿಲ್ಲ ಎನ್ನಲಾಗಿದೆ. ಇದ್ದರೂ ಒಂದಿಬ್ಬರು ಮಾತ್ರ ಅನ್ನುವ ಮಾಹಿತಿಗಳು ಲಭ್ಯವಾಗಿದೆ.
ಇನ್ನು ಸಿಡಿ ಬಿಡುಗಡೆ, ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಸೇರಿದಂತೆ ವಿವಿಧ ಕಾರ್ಯಾಚರಣೆಗಳಿದೆ ತುಮಕೂರಿನಲ್ಲಿ ನೀಲ ನಕ್ಷೆ ಸಿದ್ದವಾಗಿತ್ತು ಎನ್ನಲಾಗುತ್ತಿದೆ.
ಈಗಾಗಲೇ ಪೊಲೀಸರು ವಿಚಾರಣೆಗೆ ಕರೆಸಿರುವ ಐವರ ಪೈಕಿ ಒಬ್ಬರ ಕುಟುಂಬದ ಕಾರ್ಯಕ್ರಮದಲ್ಲಿ ಜಾರಕಿಹೊಳಿ ಜೊತೆಗೆ ಕಾಣಿಸಿಕೊಂಡ ಯುವತಿ ಸೇರಿದಂತೆ ಸಿಡಿ ಕೂಟದ ಎಲ್ಲಾ ಸದಸ್ಯರೂ ಒಟ್ಟಿಗೆ ಸೇರಿದ್ದರು. ಇಲ್ಲೇ ಸಿಡಿ ಬಿಡುಗಡೆಗೆ ಮಾಸ್ಟರ್ ಪ್ಲಾನ್ ರೂಪಿತವಾಗಿತ್ತು ಎನ್ನಲಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಜಾರಕಿಹೊಳಿ ಸಹೋದರರು ಹೇಳುತ್ತಿರುವ ಮಹಾನ್ ನಾಯಕ ಕೂಡಾ ಪಾಲ್ಗೊಂಡಿದ್ದರು ಎಂದು ಗೊತ್ತಾಗಿದೆ.
ಇದೀಗ ಇಡೀ ಕಾರ್ಯಕ್ರಮದ ವಿಡಿಯೋ ಹಾಗೂ ಫೋಟೋ ಆಲ್ಬಂ ಅನ್ನು ಎಸ್ಐಟಿ ಪೊಲೀಸರು ತರಿಸಿಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ
Discussion about this post