ಬೆಂಗಳೂರು : ಬೆತ್ತಲೆ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯನ್ನು ಅಸಲಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಇದೊಂದು ನಕಲಿ ಸಿಡಿ, ಸಿಡಿಯಲ್ಲಿರುವುದು ನಾನಲ್ಲ,ನಾನಲ್ಲ,ನಾನಲ್ಲ ಎಂದು ಹೇಳುತ್ತಿದ್ದ ಜಾರಕಿಹೊಳಿ ಇದೀಗ ಉಲ್ಟಾ ಹೊಡೆದಿದ್ದಾರೆ.
ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿರುವ ರಮೇಶ್ ಜಾರಕಿಹೊಳಿ, ನಾನು ಹನಿ ಟ್ರ್ಯಾಪ್ ಗೆ ಒಳಗಾಗಿದ್ದೇನೆ ಎಂದು ಹೇಳಿಕೆ ಮೂಲಕ ಹೇಳಿದ್ದಾರಂತೆ. ಜೊತೆಗೆ ನನಗೆ ಹಣಕ್ಕಾಗಿ ನರೇಶ್ ಗೌಡ ಮತ್ತು ಶ್ರವಣ್ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಇದೇ ಹೇಳಿಕೆಯಲ್ಲಿ ಜಾರಕಿಹೊಳಿ ಹೇಳಿದ್ದಾರಂತೆ.
ರಮೇಶ್ ಜಾರಕಿಹೊಳಿಯ ಈ ಹೇಳಿಕೆಯಿಂದ ನಕಲಿ ಸಿಡಿ ಅಸಲಿ ಅನ್ನುವುದು ಸಾಬೀತಾಗಿದೆ. ಜೊತೆಗೆ ಸಿಡಿಯಲ್ಲಿರುವ ರಮೇಶ್ ಜಾರಕಿಹೊಳಿ ಅನ್ನುವುದು ಸ್ಪಷ್ಟವಾಗಿದೆ.
ಯುವತಿಗೂ ಜಾರಕಿಹೊಳಿಗೂ ಸಂಪರ್ಕ ಇತ್ತು ಅನ್ನುವುದು ಇದೀಗ ಸ್ಪಷ್ಟವಾಗಿದೆ.
Discussion about this post