ಹಿಂದೆ ಸಿದ್ದರಾಮಯ್ಯರಂಥವರು ಬರೆದ ಇತಿಹಾಸ ಓದಿ ನಾವು ಟಿಪ್ಪು ಸುಲ್ತಾನ್ ನನ್ನು ಹೊಗಳಿದ್ದೆವು. ಈಗ ನಮಗೆ ಸತ್ಯದ ಅರಿವಾಗಿದೆ. ಹೀಗಾಗಿ ನಾವು ನಮ್ಮ ನಿಲುವನ್ನು ಬದಲಿಸಿಕೊಂಡಿದ್ದೇವೆ. ಟಿಪ್ಪು ಟೊಪ್ಪಿಯನ್ನು ಹಾಕುವುದನ್ನೂ ಬಿಟ್ಟಿದ್ದೇವೆ. ನೀವೂ ಕೂಡ ನಿಮ್ಮ ನಿಲುವನ್ನು ಬದಲಿಸಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಅಶೋಕ್ ಕಿವಿಮಾತು ಹೇಳಿದ್ದಾರೆ.
ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಆರ್. ಅಶೋಕ್, ಹಿಂದೆ ನೀವು ಸೋನಿಯಾ ಗಾಂಧಿಯವರನ್ನು ಬೈದಿರಲಿಲ್ಲವೇ? ಈಗ ಅವರನ್ನು ಹೇಗೆ ಹೊಗಳುತ್ತೀರಿ? ಸೋನಿಯಾ ವಿಚಾರದಲ್ಲಿ ನಿಮ್ಮ ನಿಲುವು ಬದಲಾದಂತೆ ಟಿಪ್ಪು ವಿಚಾರದಲ್ಲೂ ನಿಲುವು ಬದಲಾಯಿಸಿಕೊಳ್ಳಿ. ಇದು ನನ್ನ ಮನವಿ. ನೀವು ಅಬ್ದುಲ್ ಸಿದ್ದರಾಮಯ್ಯ ಆಗಲು ಹೋಗಬೇಡಿ. ಬರೀ ಸಿದ್ದರಾಮಯ್ಯ ಆಗಿದ್ದರೆ ಚೆಂದ ಎಂದು ಸಿದ್ದರಾಮಯ್ಯ ಅವರನ್ನು ಅಶೋಕ್ ತಿವಿದಿದ್ದಾರೆ.
Discussion about this post