ಪುತ್ತೂರು ತಾಲೂಕಿನ ಕಟಾರ ಎಂಬ ಹಳ್ಳಿಯ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಕುರಿತಂತೆ ತನಿಖೆ ಮುಂದುವರಿದಿದ್ದು, ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದವರ ಮೇಲೆ ಕಣ್ಣಿಟ್ಟಿದ್ದಾರೆ.
ಈ ಸಂಬಂಧ ಈಗಾಗಲೇ ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಸ್, ಪೂವಪ್ಪ, ಪವನ್ ಕುಮಾರ್, ಮೋಹಿತ್ ಪಿ.ಜಿ., ಧ್ಯಾನ್, ಅದ್ವಿತ್ ಎಂಬರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಕಡಬ ತಾಲೂಕಿನ ಶೌಕತ್ ಆಲಿ, ನಜೀರ್ ಮತ್ತು ಜಾಬಿರ್ ಎಂಬ ಯುವಕರನ್ನು ಬಂಧಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರೀಕರಣ ಮಾಡಿಕೊಂಡ ಪ್ರಕರಣ ಆರೋಪಿಗಳಾದ ಗುರುನಂದನ್, ಪ್ರಜ್ವಲ್, ಸುನಿಲ್, ಕಿಶನ್ ಮತ್ತು ಪ್ರಖ್ಯಾತ್ ಎಂಬವರನ್ನು ಬುಧವಾರವೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇಡೀ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಇದೀಗ 16 ಕ್ಕೆ ಏರಿದೆ.
Discussion about this post