ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ 44 ಯೋಧರ ಪೈಕಿ ಕರ್ನಾಟಕದ ಓರ್ವ ಯೋಧ ಹುತಾತ್ಮನಾಗಿದ್ದಾರೆ. ಮಂಡ್ಯದ 33 ವರ್ಷ ಪ್ರಾಯದ ಎಚ್.ಗುರು ಅವರು ಹುತಾತ್ಮರಾಗಿದ್ದಾರೆ.
ಎಚ್.ಗುರು ಅವರು ಮದ್ದೂರಿನ ಗುಡಿಗೆರೆ ಗ್ರಾಮದ ಹೊನ್ನಯ್ಯ ಅನ್ನುವವರ ಪುತ್ರನಾಗಿದ್ದು, ದುರಾದೃಷ್ಟ ಅಂದ್ರೆ 6 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಸಂಕ್ರಾತಿ ಸಂದರ್ಭದಲ್ಲಿ ರಜಾದಲ್ಲಿ ಊರಿಗೆ ಬಂದಿದ್ದ ಅವರು ಫೆಬ್ರವರಿ 10 ( ನಾಲ್ಕು ದಿನದ ಹಿಂದೆ) ರಂದು ಕರ್ತವ್ಯಕ್ಕೆ ಮರಳಿದ್ದರು.
ಗುರು ಅವರ ತಂದೆ ಸಣ್ಣ ಇಸ್ತ್ರಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಕೆಲ ತಿಂಗಳ ಹಿಂದಷ್ಟೇ ಮನೆಯೊಂದನ್ನು ಕಟ್ಟಿಸಿದ್ದರು.
2011ರಲ್ಲಿ ಗುರು ಅವರು ಸೇನೆಗೆ ಸೇರಿಕೊಂಡಿದ್ದರು. ಕಳೆದ ಭಾನುವಾರ ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ಪತ್ನಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು.
ಹೊನ್ನಯ್ಯ ಅವರು ತುಂಬಾ ಬಡವರಾಗಿದ್ದರು. ಮೂರು ಗಂಡು ಮಕ್ಕಳು ಒಂದು ಹಂತಕ್ಕೆ ಬಂದ ನಂತರ ಅವರ ಸ್ಥಿತಿ ಸುಧಾರಿಸಿತ್ತು. ಮೂರು ಮಕ್ಕಳಲ್ಲಿ ಗುರು ಅವರೇ ಹಿರಿಯರಾಗಿದ್ದು, ಕಿರಿಯವರಲ್ಲಿ ಒಬ್ಬರು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರು ಹೋಮ್ ಗಾರ್ಡ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Discussion about this post