ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka gandhi) ಯುಪಿಯಲ್ಲಿ ಅಧಿಕೃತವಾಗಿ ಬಂಧಿಸಲಾಗಿದೆ. ಶಾಂತಿ ಕದಡಿದ ಆರೋಪದಡಿ ಪ್ರಿಯಾಂಕಾ ವಿರುದ್ಧ FIR ದಾಖಲಿಸಲಾಗಿದ್ದು, ಸೋಮವಾರದಿಂದ ಅವರು ಗೃಹ ಬಂಧನದಲ್ಲಿದ್ದರು.
ಲಖೀಂಪುರ ಹಿಂಸಾಚಾರಕ್ಕೊಳಗಾದ ರೈತರನ್ನು ಭೇಟಿಯಾಗಲು ಪ್ರಿಯಾಂಕಾ ವಾದ್ರಾ ಮುಂದಾಗಿದ್ದರು. ಈ ನಡುವೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಈ ಬಗ್ಗೆ ರಾಷ್ಟ್ರ ವ್ಯಾಪ್ತಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದ ಕಾಂಗ್ರೆಸ್ ಬೀದಿಗಿಳಿದಿತ್ತು. ಇನ್ನು ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ಪೊಲೀಸರು ನನ್ನನ್ನು ಬಂಧಿಸಬಹುದು. ಆದರೆ ನಾನು ರೈತ ಕುಟುಂಬಗಳನ್ನು ಭೇಟಿಯಾಗದೆ ಹಿಂತಿರುಗುವುದಿಲ್ಲ ಎಂದು ಘೋಷಿಸಿದ್ದಾರೆ.
Jammu and Kashmir Congress chief Ghulam Ahmad Mir along with party workers stage a protest in Srinagar, against Priyanka Gandhi Vadra's detention pic.twitter.com/F4TH3svGvr
— ANI (@ANI) October 5, 2021
ಇನ್ನು ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ FIR ದಾಖಲಿಸಲಾಗಿದೆ. ಈ ಬಗ್ಗೆ ಸೀತಾಪುರ ಜಿಲ್ಲೆಯ ಹರ್ಗಾಂವ್ ಪೊಲೀಸ್ ಠಾಣೆಯ ಮುಖ್ಯಸ್ಥರು ಮಾಹಿತಿ ನೀಡಿದ್ದು ಪ್ರಿಯಾಂಕಾ ವಾದ್ರಾ, ದೀಪೇಂದ್ರ ಹೂಡ ಹಾಗೂ ಅಜಯ್ ಕುಮಾರ್ ಲಾಲು ಸೇರಿ ಒಟ್ಟು 11 ಮಂದಿಯ ಹೆಸರನ್ನು FIR ನಲ್ಲಿ ಸೇರಿಸಲಾಗಿದೆ.
ಇನ್ನು ಪ್ರಿಯಾಂಕಾ ಗಾಂಧಿ ಬಂಧನ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪದ ಸುರಿಮಳೆಯಾಗುತ್ತಿದೆ.
Congress supporters continue to protest outside PAC guest house in Sitapur where party leader Priyanka Gandhi Vadra is detained
— ANI UP (@ANINewsUP) October 5, 2021
She was detained yesterday while she was on her way to Lakhimpur Kheri pic.twitter.com/7HuQq5w2ch
Discussion about this post