ನವೆಂಬರ್ 10ರೊಳಗೆ ನಗರದ ರಸ್ತೆಯನ್ನು ಗುಂಡಿ ಮುಕ್ತವಾಗಿ ಮಾಡಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದರು. ಪಾಲಿಕೆ ಅಧಿಕಾರಿಗಳು ಇದಕ್ಕೆ ಒಪ್ಪಿದ್ದರು.
ಹೀಗಾಗಿ ನವೆಂಬರ್ 10ರ ಗಡುವು ಹಾಕಿಕೊಂಡಿದ್ದ ಅಧಿಕಾರಿಗಳು ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿ ಮಾಡಲು ಶ್ರಮಿಸಿದ್ದರು. ಆದರೆ ಗಡುವಿನೊಳಗೆ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಸಂಜೆ ಸುರಿದ ಮಳೆ, ಆಯೋಧ್ಯೆ ತೀರ್ಪಿನ ಕಾರಣ ಕೆಲಸ ವಿಳಂಭವಾಗಿತ್ತು. ಹೀಗಾಗಿ ಬಾಕಿ ಉಳಿದಿರುವ ಗುಂಡಿಗಳನ್ನು ಮುಚ್ಚಲು ಗಡುವು ವಿಸ್ತರಿಸಲಾಗಿದೆ.
ಇನ್ನು ಬೆಂಗಳೂರಿನ ಶಾಸಕರು ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಒಂದಿಷ್ಟು ಕಾಳಜಿ ವಹಿಸಿದ್ದರೆ ಇನ್ನೂ ಚೆನ್ನಾಗಿ ಗುಂಡಿ ಮುಚ್ಚಬಹುದಿತ್ತು. ಹಲವು ಕಡೆಗಳಲ್ಲಿ ಗುಂಡಿ ಮುಚ್ಚಿದ ಜಾಗದಲ್ಲಿ ಹಂಪ್ಸ್ ಗಳು ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿ ಕಾಟಾಚಾರಕ್ಕೆ ಅನ್ನುವಂತೆ ಡಾಂಬರ್ ಸುರಿದು ಹೋಗಿದ್ದಾರೆ.
ಆದರೂ ಪರವಾಗಿಲ್ಲ ಗುಂಡಿಗಿಂತ ಈ ಹಂಪ್ಸ್ ಗಳೇ ವಾಸಿ ಅನ್ನುವಂತಾಗಿದೆ. ಇದು ಎಷ್ಟು ದಿನ ಬಾಳಿಕೆ ಬರುತ್ತದೆ ಅನ್ನುವುದು ಮಾತ್ರ ಯಕ್ಷ ಪ್ರಶ್ನೆ. ಒಟ್ಟಿನಲ್ಲಿ ಬಿಬಿಎಂಪಿ ಮೇಯರ್ ಮತ್ತು ಆಯುಕ್ತರಿಗೆ ಧನ್ಯವಾದವೊಂದನ್ನು ಹೇಳಬೇಕು. ಈವರೆಗೆ ಬಂದ ಮೇಯರ್ ಅಥವಾ ಆಯುಕ್ತರು ಈ ರೀತಿಯ ಕಾರ್ಯವನ್ನು ಮಾಡಿರಲಿಲ್ಲ.
Discussion about this post