ಬೆಂಗಳೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದೆ ಅನ್ನುವ ಆರೋಪ ಇಂದು ನಿನ್ನೆಯದಲ್ಲ.
ಕರ್ನಾಟಕದಲ್ಲಿ ನಡೆಯೋ ಕೇಂದ್ರ ಸರ್ಕಾರದ ಅದ್ಯಾವ ಕಾರ್ಯಕ್ರಮವಾಗ್ಲಿ ಅಲ್ಲಿ ಕನ್ನಡದ ಅವಗಣನೆ ಗ್ಯಾರಂಟಿ.
ಕೆಲ ದಿನಗಳ ಹಿಂದೆ ನಡೆದ ಎರೋ ಇಂಡಿಯಾದಲ್ಲಿ ಕನ್ನಡದ ಒಂದೇ ಒಂದು ಅಕ್ಷರಕ್ಕೆ ಜಾಗವಿರಲಿಲ್ಲ. ಕೇಳಿದ್ರೆ ಇಲ್ಲಿ ವಿದೇಶಿಯರು ಬರ್ತಾರೆ ಅನ್ನುವು ಉಡಾಫೆ ಉತ್ತರ.
ಅಷ್ಟೇ ಯಾಕೆ ಭದ್ರಾವತಿಯ ಡಿಎಆರ್ ಜಾಗದಲ್ಲಿ ನಿರ್ಮಾಣವಾಗಲಿರುವ ಆರ್ಎಎಫ್ ಕೇಂದ್ರದ ಶಂಕು ಸ್ಥಾಪನೆ ಜನವರಿಯಲ್ಲಿ ನಡೆಯಿತು.
ಅಮಿತ್ ಶಾ ನೆರವೇರಿಸಿದ ಶಂಕು ಸ್ಥಾಪನೆ ಫಲಕದಲ್ಲಿ ಕನ್ನಡಕ್ಕೆ ಜಾಗವೇ ಇರಲಿಲ್ಲ. ಇದನ್ನು ಪ್ರಶ್ನಿಸಿದ ಸಂದರ್ಭದಲ್ಲೂ ಬಿಜೆಪಿ ನಾಯಕರು ಕೊಟ್ಟಿದ್ದು ಉಡಾಫೆಯ ಉತ್ತರ.
ಅದು ಕೇಂದ್ರ ಸರ್ಕಾರ ಯೋಜನೆ ಅನ್ನುವ ಹಾರಿಕೆಯ ಮಾತು. ಆದರೆ ಆ ಕೇಂದ್ರಕ್ಕೆ ರಾಜ್ಯ ಸರ್ಕಾರ 50 ಎಕರೆ ಭೂಮಿ ಕೊಟ್ಟಿದೆ ಅನ್ನುವುದನ್ನು ಅವರು ಮರೆತಿದ್ದಾರೆ. ಅವತ್ತು ಕಾರ್ಯಕ್ರಮ ನಡೆದ ವೇದಿಕೆಯಲ್ಲೂ ರಾರಾಜಿಸಿದ್ದು ಹಿಂದಿಯೇ ಹೊರತು ಕನ್ನಡಕ್ಕೆ ಜಾಗವೇ ಇರಲಿಲ್ಲ.
ಅವತ್ತು ಮಾಜಿ ಕುಮಾರಸ್ವಾಮಿ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ದನಿ ಎತ್ತಿದರೂ, ಕರ್ನಾಟಕದ ಬಿಜೆಪಿ ನಾಯಕರಲ್ಲಿ ಕನ್ನಡ ಪ್ರೀತಿಯೇ ಇರಲಿಲ್ಲ.
ಆದರೆ ಇಂದು ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಅಲ್ಲಿ ನಡೆದ ಬಹುತೇಕ ಯೋಜನೆಗಳು ಕೇಂದ್ರ ಸರ್ಕಾರದ್ದೇ ಆಗಿತ್ತು. ರಾಜ್ಯ ಸರ್ಕಾರದ ಯಾವುದೇ ಯೋಜನೆಗಳು ಇರಲಿಲ್ಲ.
ಆದರೆ ಅಲ್ಲಿ ಮೋದಿ ಅನಾವರಣಗೊಳಿಸಿದ ಒಂದೇ ಒಂದು ಫಲಕದಲ್ಲಿ ಹಿಂದಿಯ ಒಂದು ಅಕ್ಷರವಿರಲಿಲ್ಲ. ಕೇವಲ ಹಿಂದಿ ಮತ್ತು ತಮಿಳು ರಾರಾಜಿಸುತ್ತಿತ್ತು.
ವೇದಿಕೆಯ ಹಿಂದೆ ತಮಿಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಪ್ಪಿ ತಪ್ಪಿಯೂ ಹಿಂದಿಯ ಒಂದು ಅಕ್ಷರವಿರಲಿಲ್ಲ. ಅಲ್ಲಿ ಮೆರೆದಿದ್ದು ತಮಿಳು ಮಾತ್ರ.
ಅಲ್ಲಿಗೆ ಒಂದು ಸ್ಪಷ್ಟವಾಯ್ತು, ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡೋದು ಸುಲಭ, ತಮಿಳುನಾಡಿನಲ್ಲಿ ಸಾಧ್ಯವಿಲ್ಲ ಎಂದು.
ಅಷ್ಟೇ ಅಲ್ಲದೆ ನಮ್ಮ ರಾಜಕಾರಣಿಗಳಿಗೆ ಕೇಂದ್ರ ಈ ನಿಲುವನ್ನು ಪ್ರಶ್ನಿಸೋ ಧಮ್ ಇಲ್ಲ ಅನ್ನೋದು ಪಕ್ಕಾ ಆಗಿದೆ.
ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಿತ್ತಿದ್ರು ಬಿಜೆಪಿ ನಾಯಕರು ಸೈಲೆಂಟ್ ಆಗಿದ್ದಾರೆ ಅಂದ್ರೆ ಅವರನ್ನು ಮುಂದಿನ ಸಲ ಗೆಲ್ಲಿಸುವ ಅಗತ್ಯವೇನಿದೆ.
Discussion about this post