ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಬಹುತೇಕ ನಗರಗಳು ಖಾಲಿ ಹೊಡೆಯುತ್ತಿದೆ. ಈ ನಡುವೆ ವುಹಾನ್ ನಲ್ಲಿರುವ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ವಾಪಾಸ್ಸು ಕರೆ ತರಲಾಗಿದೆ.
ವುಹಾನ್ ನಗರದಿಂದ ಭಾರತೀಯರನ್ನು ಕರೆ ತರಲು ತೆರಳಿದ್ದ ಎರಡು ಏರ್ ಇಂಡಿಯಾ ವಿಮಾನಗಳು ಇದೀಗ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಭಾರತೀಯರನ್ನು ಕರೆ ತರುವ ಸಲುವಾಗಿ ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು. ರಾಯಭಾರ ಕಚೇರಿಯಲ್ಲಿ ಈ ಸಲುವಾಗಿ ಹಗಲು ರಾತ್ರಿ ಕೆಲಸ ಮಾಡಲಾಗಿತ್ತು.
ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಸರ್ಕಾರ ಇಷ್ಟೆಲ್ಲಾ ವ್ಯವಸ್ಥೆ ಮಾಡುತ್ತಿದ್ದರೂ, ಪಕ್ಕದ ರಾಷ್ಟ್ರ ಪಾಕಿಸ್ಥಾನ ತನ್ನ ಪ್ರಜೆಗಳನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ಥಾನಕ್ಕೆ ಚೀನಾ ಸಿಕ್ಕಾಪಟ್ಟೆ ಆತ್ಮೀಯ ರಾಷ್ಟ್ರ. ಭಾರತದ ಮೇಲೆ ಕಾಲು ಕೆದರಿ ಜಗಳ ಮಾಡಲು ಪಾಕಿಸ್ತಾನದ ಬೆನ್ನಿಗೆ ನಿಂತಿರುವುದೇ ಪಾಕಿಸ್ತಾನ. ಹೀಗಾಗಿ ಚೀನಾ ಮತ್ತು ಪಾಕಿಸ್ತಾನದ ಒಗ್ಗಟ್ಟು ನಿರೂಪಿಸುವ ಸಲುವಾಗಿ ತಾನು ತನ್ನ ಪ್ರಜೆಗಳನ್ನು ಮರಳಿ ಕರೆತರುವುದಿಲ್ಲ ಎಂದು ಇಮ್ರಾನ್ ಖಾನ್ ಸರಕಾರ ಹೇಳಿದೆ.
ಅತ್ತ ಪಾಕ್ ಪ್ರಧಾನಿ ಈ ಹೇಳಿಕೆ ನೀಡುತ್ತಿದ್ದಂತೆ ವುಹಾನ್ ನಲ್ಲಿರುವ ಪಾಕಿಸ್ಥಾನಿ ವಿದ್ಯಾರ್ಥಿಗಳು ಸಿಡಿದೆದ್ದಿದಾರೆ.ಭಾರತೀಯ ವಿದ್ಯಾರ್ಥಿಗಳು ನಿರಾತಂಕವಾಗಿ ತವರಿಗೆ ಮರಳುವುದನ್ನು ಕಂಡು ತಮ್ಮನ್ನೂ ಕರೆಸಲು ವ್ಯವಸ್ಥೆ ಮಾಡುವಂತೆ ಪಾಕ್ ಸರ್ಕಾರಕ್ಕೆ ಕೋರುತ್ತಿದ್ದಾರೆ.
ಅಂತಹುದೇ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ” ಬಾಂಗ್ಲಾದೇಶಿಗಳನ್ನೂ ಕರೆಸಲಾಗುತ್ತಿದೆ. ಆದರೆ ನಾವು ಸತ್ತರೂ ನಮ್ಮನ್ನು ಪಾಕಿಸ್ಥಾನಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇಲ್ಲ. ಪಾಕಿಸ್ಥಾನ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಪಾಕ್ ವಿದ್ಯಾರ್ಥಿಯೇ ಇಮ್ರಾನ್ ಸರ್ಕಾರಕ್ಕೆ ಉಗಿದಿದ್ದಾರೆ.
Discussion about this post