ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ವಿಧಿ 370ರ ರದ್ಧತಿ ಬಳಿಕ ಭಾರತದ ವಿರುದ್ಧ ಸೆಟೆದು ನಿಂತಿದ್ದ ಪಾಕಿಸ್ತಾನ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಸಂಬಂಧವನ್ನು ಕಡಿತಗೊಳಿಸಿತ್ತು.
ಪಾಕಿಸ್ತಾನ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ತಲೆಕೆಡಿಸಿಕೊಳ್ಳದ ಭಾರತ ನಿಮ್ಮೊಂದಿಗೆ ವ್ಯಾಪಾರ ವಹಿವಾಟು ನಡೆಯದಿದ್ದರೆ ನಮಗೇನು ತೊಂದರೆಯಾಗಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿತ್ತು.
ಅತ್ತ ಪಾಕ್ ವ್ಯಾಪಾರ ಸಂಬಂಧ ಕಡಿತಗೊಳಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗಿತ್ತು. ತರಕಾರಿ ಮತ್ತು ದಿನ ಬಳಕೆ ವಸ್ತುಗಳ ಬೆಲೆ ಗಗನ ಮುಖಿಯಾಗಿತ್ತು. ಜೊತೆಗೆ ಜೀವ ರಕ್ಷಕ ಔಷಧಿಗಳ ಬೆಲೆಯೂ ಗಗನಕ್ಕೇರಿದ್ದು, ಪಾಕಿಸ್ತಾನದಲ್ಲಿ ಔಷಧಿಗಳ ಕೊರತೆ ಎದುರಾಗಿತ್ತು.
ಪಾಕಿಸ್ತಾನದ ಜನ ಸಂಕಷ್ಟಕ್ಕೀಡಾಗುತ್ತಿದ್ದಂತೆ ಔಷಧಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ಪಾಕಿಸ್ತಾನಕ್ಕೆ ಸರಬರಾಜು ಆಗುವ ಒಟ್ಟಾರೆ ಔಷಧಿಗಳ ಪೈಕಿ ಶೇ. 65ಕ್ಕೂ ಅಧಿಕ ಔಷಧಿಗಳು ಭಾರತದ ಮುಖಾಂತರವೇ ರಫ್ತಾಗುತ್ತದೆ. ಹೀಗಾಗಿ ಪಾಕಿಸ್ತಾನ ಇದೀಗ ಇಂಗು ತಿಂದ ಮಂಗನಂತಾಗಿದೆ. ಅದರಲ್ಲೂ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಗೆ ಪಾಕಿಸ್ತಾನಕ್ಕೆ ಭಾರತದ ಮುಖಾಂತರವೇ ಔಷಧಿಗಳ ರವಾನೆಯಾಗುತ್ತಿತ್ತು. ಹೀಗಾಗಿ ಇದೀಗ ಔಷಧಿಗಾಗಿ ಇಮ್ರಾನ್ ಖಾನ್ ಭಾರತದ ಮುಂದೆ ಬೇಡುವಂತಾಗಿದೆ.
Discussion about this post