ಕೆಲಸವಿಲ್ಲದವನು ಅದೇನೋ
ಮಾಡಿದನಂತೆ, ಇದೀಗ ಅದೇ ಪರಿಸ್ಥಿತಿ ಗೃಹ ಸಚಿವ ಅಮಿತ್ ಸಾ ಅವರದ್ದಾಗಿದೆ. ಕಾಶ್ಮೀರ ವಿಚಾರದಲ್ಲಿ
ದಿಟ್ಟ ನಿಲುವು ತೆಗೆದುಕೊಂಡು ಹೀರೋ ಆಗಿದ್ದ ಆಮಿತ್ ಶಾ ಇಂದು ಭಾಷೆಯ ವಿಚಾರ ಕೆದಕಿ ವಿಲನ್
ಆಗಿದ್ದಾರೆ.
ಒಂದು ದೇಶ ಒಂದು ಭಾಷೆಯ ವಿಚಾರ ಪ್ರಸ್ತಾಪಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಹಿಂದಿ ಹೇರಿಕೆ ಸಲುವಾಗಿ ಕೇಂದ್ರ ಸರ್ಕಾರ ಹಲವು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಈ ನಡುವೆ ಶಾ ಹೇಳಿಕೆ, ಹಿಂದಿ ಹೇರಿಕೆ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಕಾರಣದಿಂದ ಸಿಡಿದೆದ್ದಿರುವ ಪ್ರಾದೇಶಿಕ ಭಾಷಾ ಪ್ರೇಮಿಗಳು, ಹಿಂದಿಯನ್ನು ನಮ್ಮ ಮೇಲೆ ಬಲವಂತವಾಗಿ ಹೇರುವ ಪ್ರಯತ್ನ ನಡೆಸಿದರೆ ಅತ್ಯುಗ್ರ ಹೋರಾಟ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಭಾರತ ಶ್ರೀಮಂತವಾಗಿರುವುದು ವಿಭಿನ್ನ ಭಾಷೆ, ನಡೆನುಡಿಗಳಿಂದ, ಆಯಾ ರಾಜ್ಯಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯತೆಯಿಂದ. ಕೇವಲ ಹಿಂದಿ ಭಾಷೆಯಿಂದ ಭಾರತ ಮತ್ತಷ್ಟು ಬಲಿಷ್ಠವಾಗದು ಎಂಬುದನ್ನು ಅಮಿತ್ ಶಾ ಅವರು ತಿಳಿದುಕೊಂಡರೆ ಒಳಿತು.
Discussion about this post