ಇತ್ತೀಚಿಗೆ ನಿಧನರಾದ ಚಿತ್ರನಟ, ಅಭಿಮಾನಿಗಳ ಪಾಲಿನ ಕಲಿಯುಗದ ಕರ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ ಅಂಬರೀಶ್ ಅವರಿಗೆ ಸಂಸತ್ತು ಅವಮಾನಿಸಿದೆ. ಮೇಲ್ನೋಟಕ್ಕೆ ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ಕಾರ್ಯ ಅನ್ನುವ ಸಂಶಯ ಬಂದಿದೆ. ಆದರೆ ಕಣ್ತಪ್ಪಿನಿಂದ ಹೀಗಾಗಿದೆ ಎಂದು ನಾಳೆ ನಮ್ಮನಾಳುವ ಮಂದಿ ತೇಪೆ ಸಾರಿದರೂ ಅಚ್ಚರಿ ಇಲ್ಲ.
ಸಂಸತ್ತಿನ ಯಾವುದೇ ಅವಧಿಯ ಅಧಿವೇಶನ ಪ್ರಾರಂಭವಾದ ಸಂದರ್ಭದ ಆರಂಭದ ದಿನಗಳಲ್ಲಿ ನಿಧನ ಹೊಂದಿದ ಸಂಸತ್ತಿನ ಸದಸ್ಯರಿಗೆ ಸಂತಾಪ ಸೂಚಿಸುವುದು ಸಂಪ್ರದಾಯ.
ಅದರಂತೆ ನಿನ್ನೆ ನಿಧನ ಹೊಂದಿದ ಹಾಲಿ ಸದಸ್ಯರೊಂದಿಗೆ ಮಾಜಿ ಸದಸ್ಯರಿಗೂ ಸಂತಾಪ ಸಲ್ಲಿಸಲಾಗಿತ್ತು.
ಆದರೆ ಅಧಿವೇಶನ ಪ್ರಾರಂಭವಾಗಿ ಎರಡು ದಿನ ಕಳೆದರೂ ಅಂಬರೀಶ್ ನಿಧನಕ್ಕೆ ಲೋಕಸಭೆಯಲ್ಲಿ ಸಂತಾಸ ಸೂಚಿಸಲಾಗಿಲ್ಲ.
ನಿನ್ನೆ ಕಲಾಪ ಪ್ರಾರಂಭವಾಗುತ್ತಿದ್ದಂತೆ,ಅಗಲಿದ ಹಾಲಿ ಸಂಸದರಾಗಿದ್ದವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗಿತ್ತು. ಈ ವೇಳೆ ಅನಂತ ಕುಮಾರ್ ಹೆಸರು ಕೂಡಾಸೇರಿತ್ತು. ಈ ವೇಳೆ ಅಂಬರೀಶ್ ಹೆಸರು ಬಿಟ್ಟುಹೋಗಿರುವುದರ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರು ನೆನಪಿಸಿದ್ದರು. ಆದರೆ ಸ್ಪೀಕರ್ ಸುಮಿತ್ರಾಮಹಾಜನ್ ಇಂದು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.
ಇಂದು ಮತ್ತೆ 11 ಅಗಲಿದ ಮಾಜಿ ಸಂಸದರ ಹೆಸರನ್ನು ಸುಮಿತ್ರಾ ಮಹಾಜನ್ ಹೆಸರು ಪ್ರಸ್ತಾಪಿಸಿದರು. ಅದರಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಮಾಜಿ ಸಂಸದ ಜಾಫರ್ ಷರೀಫ್ ಹೆಸರು ಸೇರಿತ್ತು. ಆದರೆ ಮಂಡ್ಯದಿಂದ ಆಯ್ಕೆಯಾಗಿದ್ದ ಅಂಬರೀಶ್ ಅವರ ಹೆಸರೇ ಇರಲಿಲ್ಲ.
ಸ್ಪೀಕರ್ ಪಟ್ಟಿ ಓದಿ ಮುಗಿಸುತ್ತಿದ್ದಂತೆ ಎದ್ದು ನಿಂತ ಸಂಸದಮಲ್ಲಿಕಾರ್ಜುನ ಖರ್ಗೆ ಅಂಬರೀಶ್ ಹೆಸರನ್ನು ನೆನಪಿಸಿದರು. ನಾಳೆ ತೆಗೆದುಕೊಳ್ಳೋಣ ಎಂದು ಸ್ಪೀಕರ್ ಕಲಾಪ ಪಟ್ಟಿಯನ್ನು ಕೈಗೆತ್ತಿಕೊಂಡರು.
ಕನಿಷ್ಟ ಪಕ್ಷ ಅಂಬರೀಶ್ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಬಿಜೆಪಿಸಂಸದರಾದರೂ ತುಟಿ ಬಿಚ್ಚಬಹುದಿತ್ತು. ಅದ್ಯಾಕೆ ಅಂಬರೀಶ್ ಹೆಸರು ಕೈ ಬಿಟ್ರಿ ಎಂದು ಪ್ರಶ್ನಿಸಬಹುದಿತ್ತು. ಆದರೆ ಮೋದಿ ಮುಂದೆ ತುಟಿ ಬಿಚ್ಚುವ ತಾಕತ್ತು ಇವರಿಗೆಲ್ಲಿದೆ. ಹೋಗ್ಲಿ ಮಲ್ಲಿಕಾರ್ಜುನ ಜೊತೆಗೆ ಕಾಂಗ್ರೆಸ್ ಇತರ ಸಂಸದರಾದರು ಅಂಬರೀಶ್ ಅವರನ್ನು ನೆನಪಿಸಿದ್ರ ಇಲ್ಲ.ಎಲ್ಲಾ ಹೀಗೆ ಇರೋ ತನಕ. ಹೋದ ಮೇಲೆ ಅಷ್ಟೇ.
ಇನ್ನು ಲೋಕಸಭೆಯಲ್ಲಿ ಅಂಬರೀಶ್ ಅವರಿಗೆ ಸಂತಾಪಸೂಚಿಸದ ಕೇಂದ್ರ ಸರ್ಕಾರದ ಕ್ರಮವನ್ನು ಸಿಎಂ ಕುಮಾರಸ್ವಾಮಿ ಕೂಡ ಖಂಡಿಸಿದ್ದು, ಇದು ಬಿಜೆಪಿಯ ಸಣ್ಣತನವನ್ನು ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.
Discussion about this post