Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವಿವಾಹಿತನೊಂದಿಗೆ ಅಕ್ರಮ ಸಂಬಂಧ : ಪ್ರೇಯಸಿಯನ್ನೇ ಕೊಲೆಗೈದ ಪ್ರಿಯಕರ

Radhakrishna Anegundi by Radhakrishna Anegundi
14-06-22, 8 : 37 am
in ಕ್ರೈಮ್
crime12
Share on FacebookShare on TwitterWhatsAppTelegram

ಗೆಳತಿಯ ಪತಿಯನ್ನೇ ಪ್ರೀತಿಸಿದ ತಪ್ಪಿಗೆ ಇದೀಗ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಪತ್ನಿಯ ಸ್ನೇಹಿತನ್ನು ಪ್ರೀತಿಸಿ, ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

ಬೆಂಗಳೂರು : ಮಚ್ಚು ಹಿಡಿದವನಿಗೆ ಮಚ್ಚಿನಿಂದಲೇ ಮರಣ ಅನ್ನುವುದು ರೌಡಿಗಳ ಲೋಕದ ಮಾತು ಹೀಗಾಗಿಯೇ ಮಚ್ಚು ಹಿಡಿಯೋ ಕೆಲಸ ಮಾಡುವ ಬದಲು ನಿಯತ್ತಿನಿಂದ ಬದುಕಿ ಎಂದು ಪೊಲೀಸರು ಪಾಠ ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಅಕ್ರಮ ಸಂಬಂಧ. ಅಕ್ರಮ ಸಂಬಂಧ ಜಾಲದೊಳಗೆ ಸಿಲುಕಿದರೆ ಯಮಕಿಂಕರರು ಹತ್ತಿರದಲ್ಲೇ ಸುಳಿದಾಡುತ್ತಿದ್ದಾರೆ ಎಂದೇ ಅರ್ಥ.

ಬೇರೊಬ್ಬ ಯುವಕನ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾಳೆ ಅನ್ನುವ ಅನುಮಾನದ ಹಿನ್ನಲೆಯಲ್ಲಿ ಪ್ರೇಯಸಿಯನ್ನು ಆಕೆಯ ಪ್ರಿಯಕರೇ ಕೊಲೆ ಮಾಡಿ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು HAL ನಿವಾಸಿ ದೀಪಾ ಪರಮ್ ( 22 ) ಎಂದು ಗುರುತಿಸಲಾಗಿದೆ. ಇನ್ನು ಕೊಲೆ ಮಾಡಿದ ಅನ್ಭುಲ್ ರತನ್ ಕಂದರ್ (25) ತಲೆ ಮರೆಸಿಕೊಂಡಿದ್ದಾನೆ.

ಜೂನ್ 9 ರಂದು ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಸ್ನೇಹಿತೆಯನ್ನೇ ಪ್ರೀತಿಸುತ್ತಿದ್ದ ರತನ್  ಯಶವಂತಪುರ ಸಮೀಪದ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದೈಹಿಕ ಸಂಬಂಧ ಬೆಳೆಸಿ ಬಳಿಕ ತಲೆದಿಂಬು ಬಳಸಿ ಹತ್ಯೆ ಮಾಡಿದ್ದಾನೆ. ನಂತರ ರೂಮ್ ನ ಬಾಗಿಲು ಲಾಕ್ ಮಾಡಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನಲೆ

ದೀಪಾ ಪದಮ್ ಹಾಗೂ ಅನ್ಭುಲ್ ಪತ್ನಿ ದೀನಮತಿ ಅಕ ದೀಪಾ ಬಾಲ್ಯದ ಗೆಳೆಯರಾಗಿದ್ದರು. ದೀಪಾಗೂ ವಿವಾಹವಾಗಿದ್ದು, ಆಕೆಯ ಪತಿ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ದೀಪಾ ಹಾಗೂ ದೀಪಾಲಿ ಬೆಂಗಳೂರಿನ ಬೇರೆ ಬೇರೆ ಸ್ಟೋರ್ ಒಂ ನಲ್ಲಿ ಕೆಲಸ ಮಾಡುತ್ತಿದ್ರೆ, ಅನ್ಭುಲ್ ಚಪ್ಪಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಜೂನ್ 9 ರಂದು ಕೊಲೆ ಮಾಡಿದ ಅನ್ಭುಲ್, ಜೂನ್ 10 ರಂದು ಮನೆಗೆ ಹೋಗಿದ್ದಾನೆ. ಜೊತೆಗೆ ಬೇರೊಬ್ಬನ ಜೊತೆಗೆ ತಿರುಗಾಡಿದ ಕಾರಣಕ್ಕೆ ದೀಪಾಳನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಆಕೆ ಸತ್ತಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಒಂದು ಸಲ ಲಾಡ್ಜ್ ಬಳಿ ಹೋಗಿ ನೋಡಿಕೊಂಡು ಬಾ. ಆಕೆ ಸತ್ತಿದ್ರೆ ಹೊಟೇಲ್ ಸಿಬ್ಬಂದಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸುವಂತೆ ಹೇಳಿದ್ದಾನೆ.

ಪತ್ನಿ ಆ ಕಡೆ ಹೋಗುತ್ತಿದ್ದಂತೆ, ಆರೋಪಿ ಗಂಟುಮೂಟೆ ಕಟ್ಟಿ ಪರಾರಿಯಾಗಿದ್ದಾನೆ. ಇತ್ತ ಗೆಳತಿಯನ್ನು ನೋಡಲು ಬದ ದೀನಮತಿ, ಲಾಡ್ಜ್ ರಿಸೆಪ್ಸನಿಸ್ಟ್ ನನ್ನು ಭೇಟಿಯಾಗಿ ರೂಮ್ ನಂಬರ್ 205ರಲ್ಲಿ ಇರುವ ಗೆಳತಿಯನ್ನು ನೋಡಬೇಕು ಅಂದಿದ್ದಾಳೆ. ರೂಮ್ ಬಾಯಿ ಜೊತೆಗೆ ದೀನಮತಿಯನ್ನು ಈ ವೇಳೆ ಕಳುಹಿಸಿಕೊಡಲಾಗಿದೆ. ಆಗ ಬಾಗಿಲು ತಟ್ಟಿದ್ರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಬಾಗಿಲು ತಳ್ಳಿ ನೋಡಿದ್ರೆ ದೀಪಾ ಕೊಲೆಯಾಗಿದ್ದಳು. ಪೂರ್ವ ಯೋಜನೆಯಂತೆ ದೀನಮತಿ ಲಾಡ್ಜ್ ಸಿಬ್ಬಂದಿ ಮೇಲೆ ಆರೋಪ ಹೊರಿಸಿದ್ದಾಳೆ.

ಈ ವೇಳೆ ಪೊಲೀಸರಿಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ್ದರೆ ಆಗ ಸತ್ಯ ಹೊರ ಬಿದ್ದಿದೆ. ಈ ವೇಳೆ ದೀಪಾಲಿ ಪತಿಗೆ ಕರೆ ಮಾಡಿದ್ರೆ ಅತನ ನಂಬರ್ ಸ್ವಿಚ್ ಆಫ್ ಆಗಿತ್ತು. ಈ ನಡುವೆ I killed deepa ಅನ್ನುವ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದ.

ಅಂದ ಹಾಗೇ ಇವರೆಲ್ಲರೂ ಒರಿಸ್ಸಾ ಮೂಲದವರು ಎಂದು ಗೊತ್ತಾಗಿದೆ.

Tags: MAIN
ShareTweetSendShare

Discussion about this post

Related News

PDO ಶೃತಿ ಗೌಡ ಪ್ರಕರಣ :  ಗುಂಡಿಕ್ಕಿ ಕೊಲೆಗೈದ ರಾಜೇಶ್ ಗೆ ಜೀವಾವಧಿ ಶಿಕ್ಷೆ

PDO ಶೃತಿ ಗೌಡ ಪ್ರಕರಣ :  ಗುಂಡಿಕ್ಕಿ ಕೊಲೆಗೈದ ರಾಜೇಶ್ ಗೆ ಜೀವಾವಧಿ ಶಿಕ್ಷೆ

union-bank-assistant-manager-archana-betageri-arrested-haveri-kurubagonda

ಬ್ಯಾಂಕ್ ಹಣವನ್ನೇ ಲೂಟಿ ಹೊಡೆದ ಯೂನಿಯನ್ ಬ್ಯಾಂಕ್ ( union bank) ಸ.ಮ್ಯಾನೇಜರ್

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

Honey trap : ಮಂಚದಾಟಕ್ಕೆ ಮನೆಗೆ ಆಹ್ವಾನ : ಹನಿಟ್ರ್ಯಾಪ್’ಗೆ ಪ್ರಿಯತಮೆಯನ್ನೇ ಬಿಟ್ಟಿದ್ದ ಪ್ರೇಮಿ

KGF-inspired : ಸಿನಿಮಾ ಪ್ರೇರಣೆಯಿಂದ ಸರಣಿ ಕೊಲೆ : ಸಮಾಜದ ಸ್ವಾಸ್ಥ್ಯ ಕೆಡಿಸುವ ಚಿತ್ರಗಳ ಬಗ್ಗೆ ಇರಲಿ ಎಚ್ಚರ

Mysuru crime : ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ : ಪ್ರಿಯಕರನ್ನು ಬಂಧಿಸಿದ ಪೊಲೀಸರು

Fake journalists : ಅಕ್ಕಿ ವ್ಯಾಪಾರಿಯಿಂದ 5 ಲಕ್ಷ ಪೀಕಿಸಲು ಹೋದ 6 ಮಂದಿ ನಕಲಿ ಪತ್ರಕರ್ತರು ಅಂದರ್

Kerala honey trap : ದೇವರನಾಡಿನಲ್ಲಿ ಬಾಡಿಗೆ ಜೋಡಿ : ಒಂದು ಹನಿ ಟ್ರ್ಯಾಪ್ ಗೆ 40 ಸಾವಿರ

Bengaluru crime : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಮಿಷ : 4 ಕೋಟಿ ರೂ ಸುಲಿಗೆಗೆ ಮುಂದಾದ ಸುಂದರಿಯ ಬಂಧನ

Mandya honey trap : ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ : ಸಲ್ಮಾಭಾನು ಎಂಬಾಕೆಯನ್ನು ಬಂಧಿಸಿದ ಪೊಲೀಸರು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್