ಮಂಗಳೂರು : ಚಂದನವನದ ಖ್ಯಾತ ಪೋಷಕ ನಟಿ ಪದ್ಮಜಾ ರಾವ್ ಅವರಿಗೆ ಇದೀಗ ಬಂಧನ ಭೀತಿ ಎದುರಾಗಿದೆ.
ಸಾಲ ಪಡೆದು ವಂಚಿಸಿರುವ ಪ್ರಕರಣದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದ್ದು, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
ಮಂಗಳೂರಿನ ವೀರೂ ಟಾಕೀಸ್ ನ ವೀರೂ ಶೆಟ್ಟಿ ಅವರಿಂದ ಹಂತ ಹಂತವಾಗಿ ಹಣ ಪಡೆದಿದ್ದ ಪದ್ಮಜಾ ಅದಕ್ಕಾಗಿ ಚೆಕ್ ಒಂದನ್ನು ನೀಡಿದ್ದರು.
ಯಾವಾಗ ಸಾಲದ ಮೊತ್ತ 40 ಲಕ್ಷದ ಗಡಿ ದಾಟಿತೋ ವೀರೂ ಶೆಟ್ಟಿ ಸಾಲ ಕೊಡುವುದನ್ನು ನಿಲ್ಲಿಸಿ ಸಾಲ ವಾಪಾಸ್ ಕೇಳಿದ್ದಾರೆ.
ಆದರೆ ಪದ್ಮಜಾ ರಾವ್ ಅವರು ಸಾಲ ಹಿಂತಿರುಗಿಸುವ ಬಗ್ಗೆ ಒಲವು ತೋರಲಿಲ್ಲ. ಜೊತೆಗೆ ವೀರೂ ಶೆಟ್ಟಿಯವರ ಕರೆಗಳಿಗೂ ಉತ್ತರಿಸಲಿಲ್ಲ.
ಕೊನೆಗೆ ಪದ್ಮಜಾ ಅವರು ಕೊಟ್ಟಿದ್ದ ಚೆಕ್ ಅನ್ನು ವೀರೂ ಶೆಟ್ಟಿ ಬ್ಯಾಂಕ್ ಗೆ ಹಾಕಿದ್ದಾರೆ. ಅದು ಬೌನ್ಸ್ ಆಗಿದೆ.
ಈ ಸಂಬಂಧ ವೀರೂ ಶೆಟ್ಟಿ ದಾಖಲಿಸಿದ್ದ ದೂರಿನ ವಿಚಾರಣೆ ಮಂಗಳೂರಿನ 5ನೇ JMFC ನ್ಯಾಯಾಲಯದಲ್ಲಿ ನಡೆಯುತ್ತಿದೆ.
ದುರಂತ ಅಂದ್ರೆ ಪದೇ ಪದೇ ವಿಚಾರಣೆಗೆ ಗೈರು ಹಾಜರಾದ ಪದ್ಮಜಾ ರಾವ್ ನ್ಯಾಯಾಲಯ ಕೊಟ್ಟ ನೊಟೀಸ್ ಗಳನ್ನು ಕೂಡಾ ತಿರಸ್ಕರಿಸಿದ್ದಾರೆ.
ಹೀಗಾಗಿ ಇದೀಗ ಬಂಧನ ವಾರೆಂಟ್ ಕೊಟ್ಟಿರುವ ನ್ಯಾಯಾಲಯ, ವಾರೆಂಟ್ ಅನ್ನು ಬೆಂಗಳೂರಿನ ತಲಘಟ್ಟಪುರ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.
Discussion about this post