ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಅನ್ನುವ ಒಂದೇ ಉದ್ದೇಶದಿಂದ ರಚನೆಯಾದ ಮೈತ್ರಿ ಸರ್ಕಾರ ಪತನಗೊಂಡಿದೆ.ಒಂದು ಕಾಲದಲ್ಲಿ ಕಚ್ಚಾಡಿಗೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಬಳಿಕ ದೋಸ್ತಿಗಳಾಗಿ ಆಡಳಿತ ಚುಕ್ಕಾಣಿ ಹಿಡಿದಿತ್ತು.
ಆದರೆ ಮೈತ್ರಿ ಸರ್ಕಾರದ ನಾಯಕರ ವರ್ತನೆಯಿಂದ ಬೇಸತ್ತ ಕೆಲ ಶಾಸಕರು ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದು ಬಂಡಾಯ ಬಾವುಟ ಹಾರಿಸಿದರು. ಆ ವೇಳೆ ಕಾಂಗ್ರೆಸ್ ಜೆಡಿಎಸ್ ಶಾಸಕರ ಆಕ್ರೋಶದ ಲಾಭ ಪಡೆದ ಬಿಜೆಪಿ ಅದಕ್ಕೆ ನೀರು ಗೊಬ್ಬರ ಹಾಕಿತು. ಆ ಮೂಲಕ ಅಪರೇಷನ್ ಕಮಲ ಅನ್ನುವ ಫಸಲನ್ನು ಬಿಜೆಪಿ ಪಡೆದುಕೊಂಡಿದೆ.
ಈ ನಡುವೆ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ಸಿಎಂ ಕುಮಾರಸ್ವಾಮಿ ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು. ಜೊತೆಗೆ ಬಿಜೆಪಿ ನಾಯಕರಿಗೆ ಎಚ್ಚರಿಕೆಯನ್ನೂ ರವಾನಿಸಿದರು.
Buy Dabur Red Toothpaste Only Rs.180
ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೂ ಸಂಕಷ್ಟ ಕಾದಿದೆ,ಮಂತ್ರಿ ಮಂಡಲ ರಚನೆಯಾದ ತಕ್ಷಣ ಅಲ್ಲೂ ಬಾಂಬ್ ಬೀಳಲಿದೆ. ಸರ್ಕಾರವನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ ಅಪರೇಷನ್ ಕಮಲ ಮಾಡ್ತೀರೋ ಏನು ಮಾಡ್ತೀರೋ ಅಂದರು.
ಜೊತೆಗೆ ಆಗ ನಿಮ್ಮ ಕಡೆಯಿಂದ ನಮ್ಮ ಕಡೆಗೆ ಬರಲು ಶುರುವಾಗುತ್ತದೆ.ಆ ಕಡೆಯಿಂದ ಈ ಕಡೆಗೆ ಬರ್ತಾರೆ ಅಂದರು.
ಕುಮಾರಸ್ವಾಮಿ ಈ ಮಾತುಗಳನ್ನು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್,ಆ ಕಡೆಯಿಂದ ನಿಮ್ಮ ಕಡೆ ಬಂದ್ರೆ ಕರೆಸಿಕೊಳ್ತೀರಾ ಎಂದು ಪ್ರಶ್ನಿಸಿದರು.
Buy Comfortable Cloths for Kids Under Rs.404
ಆಗ ಚುನಾವಣೆಗೆ ಹೋಗ್ತಿವಿ ಎಂದು ಕುಮಾರಸ್ವಾಮಿ ಹೇಳುತ್ತಿದ್ದಂತೆ ಮತ್ತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ನಿಮ್ಮ ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ತೀರಾ ಎಂದು ಕೇಳಿದರು. ಆಗ ನಮ್ಮ ಪಕ್ಷದಿಂದ ಹೋಗಿರುವ ಮೂರು ಜನರನ್ನು ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟ ಪಡಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಮಾತಿಗೆಳೆದ ಸ್ಪೀಕರ್ ರಮೇಶ್ ಕುಮಾರ್, ಸಾರ್ವಜನಿಕರಿಗೊಂದು ಸಂದೇಶ ಹೋಗಬೇಕಾಗಿದೆ ಹೀಗಾಗಿ ನೀವು ಸೇರಿಸಿಕೊಳ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ‘ಬಿಜೆಪಿಯವರ ಆಮಿಷಗಳಿಗೆ ಒಳಗಾಗಿ, ಪಕ್ಷಕ್ಕೆ ದ್ರೋಹ ಮಾಡಿ, ಪಕ್ಷ ತ್ಯಜಿಸಿರುವವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಅಂದರು.
ಜಗತ್ ಪ್ರಳಯವಾದರೂ ಅವರನ್ನು ವಾಪಾಸ್ ತೆಗೆದುಕೊಳ್ಳುವುದಿಲ್ಲ. ಪಕ್ಷ ಬಿಟ್ಟು ದ್ರೋಹ ಮಾಡಿ ಹೋಗಿದ್ದಾರೆ ಅಂಥವರನ್ನು ಮತ್ತೆ ಮಣೆ ಹಾಕುವುದಿಲ್ಲ ಎಂದರು.
ಈ ವೇಳೆ ಖುಷಿಯಾದ ಸ್ಪೀಕರ್ ರಮೇಶ್ ಕುಮಾರ್ ನೀವು ದೇವರಾಜ ಅರಸು ರೀತಿ ಕಾಣಿಸ್ತೀರಿ ಎಂದು ಸಿದ್ದರಾಮಯ್ಯ ಅವರ ಬೆನ್ನು ತಟ್ಟಿದರು.
Discussion about this post