ಒಂದು ದೇಶ ಒಂದೇ ಭಾಷೆ ಅನ್ನು ಕಾನ್ಸೆಪ್ಟ್ ಅಡಿಯಲ್ಲಿ ಗೃಹ ಸಚಿವ ಅಮಿತ್ ಶಾ ಹಿಂದಿ ಭಾರತವನ್ನು ಗುರುತಿಸುವ ಭಾಷೆಯಾಗಬೇಕು ಎಂದು ಹೇಳಿದ್ದರು.
ಹಿಂದಿ ದಿವಸ್ ಸಂದರ್ಭದಲ್ಲಿ ಮಾತನಾಡಿದ್ದ ಅವರು ದೇಶದಲ್ಲಿ ಹಿಂದಿ ಭಾಷೆಯೇ ಪ್ರಮುಖವಾಗಬೇಕು. ಹಿಂದಿ ಭಾಷೆಯ ಮೂಲಕವೇ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿಕೆ ಕೊಟ್ಟಿದ್ದರು.
ಆದರೆ ಇದು ದಕ್ಷಿಣ ಭಾರತ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಯ್ತು. ಅದು ಎಲ್ಲಿಟ ಮಟ್ಟಿಗೆ ಅಂದರೆ ಬಿಜೆಪಿ ತನ್ನ ಮತ ಬ್ಯಾಂಕ್ ಗಳನ್ನು ಕಳೆದುಕೊಳ್ಳುವ ಮಟ್ಟಕ್ಕೆ ಹೋಯ್ತು.
ಆದರೆ ಬಿಜೆಪಿ ಬೆಂಬಲಿಗರು ಅಮಿತ್ ಸಾ ಹೇಳಿದ್ದು ಸರಿಯಾಗಿದೆ ಅನ್ನುವಂತೆ ವಾದ ಮಂಡಿಸಿದರು. ಕರ್ನಾಟಕದ ಕೆಲ ಬಿಜೆಪಿ ಸಂಸದರಂತು ತಾವು ಕನ್ನಡಿಗರು ಅನ್ನುವುದನ್ನು ಮರೆತು ಶಾ ಬೆಂಬಲಕ್ಕೆ ನಿಂತರು. ಇನ್ನು ಕೆಲವು ಮೋದಿ ಅಭಿಮಾನಿಗಳು ಹಿಂದಿ ಹೇರಿಕೆಯ ಸಾಧಕ ಬಾಧಕವನ್ನು ಚಿಂತಿಸಲೇ ಇಲ್ಲ. ಅಮಿತ್ ಶಾ ಹೇಳಿದ್ದು ಸರಿಯಾಗಿದೆ ಅಂದರು.
ಆದರೆ ಇದೀಗ ತಾನು ಕೊಟ್ಟ ಹೇಳಿಕೆ ತಪ್ಪಾಗಿದೆ ಅನ್ನುವುದು ಅಮಿತ್ ಶಾ ಅವರಿಗೆ ಅರಿವಾಗಿದೆ. ಪ್ರತಿಭಟನೆಯ ಬಿಸಿ ಅವರಿಗೂ ತಟ್ಟಿದ್ದು, ದೇಶದ ಎಲ್ಲೆಡೆ ಹಿಂದಿ ಭಾಷೆಯನ್ನು ಹೇರುವಂತೆ ಯಾವತ್ತೂ ಹೇಳಿಲ್ಲ. ಆದರೆ ಮಾತೃಭಾಷೆಯ ನಂತರ ಹಿಂದಿಯನ್ನು ಎರಡನೇ ಭಾಷೆಯನ್ನಾಗಿ ಬಳಸುವಂತೆ ಸಲಹೆ ನೀಡಿದ್ದೇನೆ ಅನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ರಾಂಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನೂ ಕೂಡಾ ಹಿಂದಿಯೇತರ ರಾಜ್ಯದಿಂದ ಬಂದವನು. ನಾನು ಗುಜರಾತ್ ಮೂಲದವನು. ಗುಜರಾತಿ ನನ್ನ ಮಾತೃಭಾಷೆ, ಹಿಂದಿ ಅಲ್ಲ. ಹೀಗಾಗಿ ನನ್ನ ಭಾಷಣವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳಿ. ಒಂದು ವೇಳೆ ಯಾರಾದರು ರಾಜಕೀಯಕ್ಕೆ ಬರುತ್ತಾರೆ ಎಂದಾದರೆ, ಆವಾಗ ಹಿಂದಿ ಭಾಷೆಯ ಅಗತ್ಯವಿದೆ ಎಂದು ಹೇಳಿರುವುದಾಗಿ ಶಾ ಸಮಜಾಯಿಷಿ ನೀಡಿದ್ದಾರೆ.
ಭಾರತೀಯ ಭಾಷೆಗಳು ಮತ್ತಷ್ಟು ಬಲಗೊಳ್ಳಬೇಕಾಗಿದೆ. ಅಲ್ಲದೇ ಪ್ರಾದೇಶಿಕ ಭಾಷೆಗಳೂ ಬೆಳೆಯಬೇಕಾಗಿದೆ ಎಂದು ಇದೇ ವೇಳೆ ಅಮಿತ್ ಶಾ ಹೇಳಿದ್ದಾರೆ.
ಅಲ್ಲಿಗೆ ಅಮಿತ್ ಶಾ ಅವರಿಗೆ ಪ್ರಾದೇಶಕ ಭಾಷೆಯ ತಾಕತ್ತು ಏನು ಅನ್ನುವುದು ಗೊತ್ತಾಗಿದೆ. ಆದರೆ ಅವತ್ತು ಅಮಿತ್ ಶಾ ಕೊಟ್ಟ ಎಡವಟ್ಟು ಹೇಳಿಕೆಯನ್ನು ಬೆಂಬಲಿಸಿದ ಕೆಲ ಸಜ್ಜನ ರಾಜಕಾರಣಿಗಳು, ಹಿಂದು ಮುಂದಿ ಯೋಚಿಸದೆ ಮೋದಿಯನ್ನು ಬೆಂಬಲಿಸುವ ಮಂದಿ ಏನು ಹೇಳುತ್ತಾರೋ…?
Discussion about this post