ಜ್ಯೋತಿಷಿ ನಾಗರಾಜ್ ಭಟ್ ಅವರು ಇತ್ತೀಚೆಗೆ ಹೆಬ್ರಿಯ ಮನೆಯೊಂದರ ಹಾಲ್ ಅಗೆಸಿ ಅದರಒಳಗಿದ್ದ ನಾಗಮೂರ್ತಿಯನ್ನು ಹೊರ ತೆಗೆದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಬಳಿಕ ಇದರ ಸತ್ಯಾಸತ್ಯತೆ ಬಗ್ಗೆ ಚರ್ಚೆ ಆರಂಭವಾಯಿತು.
ನಾಗರಾಜ್ ಭಟ್ ಬಗ್ಗೆ ನೆಗೆಟಿವ್ ಪ್ರಚಾರ ಶುರುವಾಗುತ್ತಿದ್ದಂತೆ, ಮಾಧ್ಯಮಗಳನ್ನುಕರೆದುಕೊಂಡು ಹೋಗಿ ಕಟ್ಟೆಯೊಳಗಿದ್ದ ನಾಗಮೂರ್ತಿ ಮತ್ತು ತ್ರಿಶೂಲ ಹೊರ ತೆಗೆದಿದ್ದರು. ಆದರೆವೆಲ್ಡ್ ಮಾಡಿದ ತ್ರಿಶೂಲ ಹೇಗೆ ಬಂತು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ಈ ಜ್ಯೋತಿಷಿ ತಮ್ಮ ಸವಾಲು ಸ್ವೀಕರಿಸಿ ಅದನ್ನುಸಾಬೀತುಪಡಿಸಿದರೆ ತಮ್ಮ ಆಸ್ತಿಯನ್ನು ಅವರಿಗೆ ನೀಡಿ, ಸಾಯುವವರೆಗೆ ಅವರಗುಲಾಮನಾಗುವೆ ಎಂದು ಘೋಷಿಸಿದ್ದಾರೆ.
ಜ್ಯೋತಿಷಿ ನೀಡುವ ನಾಗನ ಕಲ್ಲನ್ನು ಒಂದು ಪೆಟ್ಟಿಗೆಗೆ ಹಾಕಿಅದರಲ್ಲಿ ಮಣ್ಣು ತುಂಬಿ, ಅಷ್ಟೇಭಾರವಿರುವ ಅಂತಹದ್ದೇ ಹತ್ತು ಪೆಟ್ಟಿಗೆ ಇಡಲಾಗುವುದು. ನಾಗನ ಮೂರ್ತಿ ಇರುವ ಪೆಟ್ಟಿಗೆಯಲ್ಲಿನಾಗನ ಮೂರ್ತಿಗೆ ಒಂದು ಕರೆನ್ಸಿ ನೋಟು ಅಂಟಿಸಲಾಗುವುದು. ಸವಾಲು ಸ್ವೀಕರಿಸಿದ ಜ್ಯೋತಿಷಿ ಯಾವಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಇದೆ ಎಂದು ಹೇಳಬೇಕು.
ಜ್ಯೋತಿಷಿಗೆ ಭೂಮಿಯ ಒಳಗಿದ್ದ ನಾಗನ ಮೂರ್ತಿ ಹೇಗಿರುತ್ತದೆಎಂದು ಚಿತ್ರ ಬರೆಯುವಷ್ಟು ತಿಳಿದಿರುವುದರಿಂದ ನಾಗನ ಮೂರ್ತಿ ಇಡಲಾದ ಪೆಟ್ಟಿಗೆಯಲ್ಲಿರುವಕರೆನ್ಸಿ ಯಾವ ದೇಶದ್ದು, ಅದರ ಮೌಲ್ಯ ಎಷ್ಟು ಮತ್ತು ಅದರ ಸೀರಿಯಲ್ ನಂಬರ್ ಏನು ಎಂಬುದನ್ನು ತಿಳಿಸಬೇಕು. ಅದನ್ನು ಅವರು ಮಾಡಲು ಸಾಧ್ಯವಾದರೆ ತನ್ನ ಆಸ್ತಿಯನ್ನು ಪೂರ್ತಿ ಅವರಿಗೆ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಜ್ಯೋತಿಷಿ ಇದರಲ್ಲಿ ವಿಫಲರಾದರೆ ಅವರು ನಾನು ಹೇಳಿದ್ದೆಲ್ಲ ಸುಳ್ಳು ಎಂದು ಘೋಷಿಸಿ ಈಕೆಲಸವನ್ನು ಬಿಡಬೇಕು ಎಂದು ತಿಳಿಸಿದ್ದಾರೆ.
ನಾಗರಾಜ ಭಟ್ರೆ ನರೇಂದ್ರ ನಾಯಕ್ ಕೊಟ್ಟ ಸವಾಲು ಸ್ವೀಕರಿಸಿ ನೋಡೋಣ.
Discussion about this post