ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಸಕ್ರಿಯವಾಗುತ್ತಿದ್ದಂತೆ ಕನ್ನಡದ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಬಗ್ಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಾರಾಯಣಗೌಡರ ಕರವೇ ಬಗ್ಗೆ ತೀವ್ರ ಅಸಮಾಧಾನ ಪ್ರಾರಂಭವಾಗಿದೆ. ಕನ್ನಡದ ಅನೇಕ ಹೋರಾಟಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದ ನಾರಾಯಣಗೌಡರ ಹೋರಾಟ ಇತ್ತೀಚಿನ ದಿನಗಳನ್ನು ಹಾದಿ ತಪ್ಪಿರುವುದೇ ಇದಕ್ಕೆ ಕಾರಣ.
ಕನ್ನಡದ ಉದ್ಧಾರಕ್ಕಾಗಿ ಮಾಡಲು ಅನೇಕ ಕೆಲಸಗಳಿದೆ, ಕನ್ನಡ ಮೇಲಾಗುತ್ತಿರುವ ಅನ್ಯಾಯ, ಪರಭಾಷೆಯ ದಾಳಿ ವಿರುದ್ಧ ಹೋರಾಟ ರೂಪಿಸಬೇಕಾದ ಸಂದರ್ಭದಲ್ಲಿ ನಾರಾಯಣಗೌಡರು ಕಾಣಿಸಿಕೊಂಡಿದ್ದು ಡಿಕೆಶಿ ಪರವಾದ ಹೋರಾಟದಲ್ಲಿ.
ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಜೈಲು ಸೇರಿದ್ದ ಡಿಕೆಶಿಯನ್ನು ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧಿಸುತ್ತಿದೆ ಎಂದು ದೂರಿದ್ದ ನಾರಾಯಣಗೌಡರ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು.
ಆಗ ಕರವೇಯನ್ನು ಜನ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಸಮರ್ಥನೆ ಕೊಟ್ಟಿದ್ದ ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆಗೂ ಡಿಕೆಶಿ ಪರ ಹೋರಾಟಕ್ಕೂ ಸಂಬಂಧವಿಲ್ಲ ಅಂದಿದ್ದರು.
ಆದರೆ ಇದೀಗ ಅವತ್ತಿನ ಹೋರಾಟಕ್ಕೆ ಸಂಬಂಧವಿತ್ತು ಅನ್ನುವುದಕ್ಕೆ ಪುರಾವೆ ಸಿಕ್ಕಿದೆ. ಕರ್ನಾಟಕ ರಾಜ್ಯೋತ್ಸವ ದಿನದಂದು ಡಿಕೆಶಿಯವರನ್ನು ಆಹ್ವಾನಿಸಿದ್ದ ಕರವೇ ಕನ್ನ ಕಚೇರಿ ಮುಂಭಾಗದಲ್ಲಿ ಡಿಕೆಶಿ ಕಡೆಯಿಂದಲೇ ಧ್ವಜಾರೋಹಣ ನೆರವೇರಿಸಿದೆ.
ಡಿಕೆಶಿಯವರು ಧ್ವಜಾರೋಹಣ ನೆರವೇರಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಡಿಕೆಶಿಯವರ ಮೇಲೆ ಗಂಭೀರ ಆರೋಪವಿದೆ. ಅವರ ಮೇಲೆ ಕಳಂಕವಿದೆ. ಇಂತಹ ಸಂದರ್ಭದಲ್ಲಿ ನಾರಾಯಣಗೌಡರ ರಕ್ಷಣಾ ವೇದಿಕೆ ಡಿಕೆಶಿಯವರನ್ನು ಕರೆಸಿದೆ ಅಂದರೆ ಅರ್ಥವೇನು ಅನ್ನುವುದು ಎಲ್ಲರ ಪ್ರಶ್ನೆ.
ರಕ್ಷಣಾ ವೇದಿಕೆ ಅನ್ನುವುದು ಕನ್ನಡಿಗರ ಸೊತ್ತು. ಅದು ಕರ್ನಾಟಕದ ಹೆಸರಿನಲ್ಲಿದೆ. ಆ ಸಂಘಟನೆ ರೂಪಿತವಾಗಿರುವುದು ಕರ್ನಾಟಕ, ಕನ್ನಡ, ಕನ್ನಡಿಗರ ಮೇಲೆ ತೊಂದರೆಯಾದಾಗ ದನಿ ಎತ್ತಲು. ಅಂದ ಮೇಲೆ ಅಕ್ರಮ ಆಸ್ತಿ, ಭ್ರಷ್ಟಚಾರ ಆರೋಪ ಹೊತ್ತ ವ್ಯಕ್ತಿಯನ್ನು ತಲೆ ಮೇಲೆ ಹೊತ್ತು ಆಡಿಸುತ್ತಿದೆ ಅಂದ್ರೆ ಇದು ಕರ್ನಾಟಕ ರಕ್ಷಣಾ ವೇದಿಕೆಯಾಗಲು ಹೇಗೆ ಸಾಧ್ಯ.
ಇನ್ನು ಇದೇ ರಾಜ್ಯೋತ್ಸವ ಸಮಾರಂಭದಲ್ಲಿ ಡಿಕೆಶಿಯವರಿಗೆ ಸ್ಮರಣಿಕೆಯೊಂದನ್ನು ಕೊಡಲಾಗಿದೆ. ಅದು ಡಿಕೆಶಿ ಜೈಲು ಪಾಲಾದ ಸಂದರ್ಭದಲ್ಲಿ ನಡೆದ ಹೋರಾಟದ ಫೋಟೋ. ಅಂದ ಮೇಲೆ ರಕ್ಷಣಾ ವೇದಿಕೆಗೂ ಡಿಕೆಶಿ ಪರ ಹೋರಾಟಕ್ಕೂ ಸಂಬಂಧವಿಲ್ಲ ಅನ್ನುವುದು ಹಾಸ್ಯಾಸ್ಪದವಲ್ಲವೇ.
ಡಿಕೆಶಿಯವರನ್ನು ಕರೆಸಿ ಕಾರ್ಯಕ್ರಮ ನಡೆಸುವ ಬದಲು ಕನ್ನಡ ಧ್ವಜ ಹಾರಿಸುವಂತೆ ಯಡಿಯೂರಪ್ಪ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಪ್ರತಿಭಟನೆ ಮಾಡಬಹುದಿತ್ತು.
Discussion about this post