ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಆಗಸ್ಟ್ 24 ರ ಸಂಜೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಕರ್ನಾಟಕ ಪೊಲೀಸ್ ವ್ಯವಸ್ಥೆಯ ಮೇಲೆ ಆಕ್ರೋಶವೊಂದನ್ನು ಹೊರ ಹಾಕಿತ್ತು. ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಬದಿಗಿಟ್ಟು ದಂಡ ವಸೂಲಿ ಕೆಲಸ ಶುರುವಿಟ್ಟುಕೊಂಡ ಕಾರಣದಿಂದಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದು ದೂರಿದ್ದರು. ಜೊತೆಗೆ ಕೊರೋನಾ ಕೆಲಸಕ್ಕಾಗಿ ಪೊಲೀಸರನ್ನು ಬಳಸಿಕೊಂಡಿರುವುದು ಕೂಡಾ ಇಂತಹ ಘಟನೆಗಳಿಗೆ ಕಾರಣ ಎಂದು ವಿಶ್ಲೇಷಿಸಿದ್ದರು. ಮತ್ತೆ ಕೆಲವರು, ರಾಜಕಾರಣಿಗಳ ಕಾವಲು ಕಾಯುವುದೇ ಪೊಲೀಸರ ಕಾಯಕವಾಗಿದೆ. ಮೊದಲು ಇಂತಹ ಸಂಪ್ರದಾಯಕ್ಕೆ ಬ್ರೇಕ್ ಬೀಳಬೇಕು ಅಂದಿದ್ದರು.
ಒಟ್ಟಿನಲ್ಲಿ ಈ ಘಟನೆ ಮೈಸೂರು ಪೊಲೀಸರ ಕಾರ್ಯವೈಖರಿಗೊಂದು ಕಪ್ಪು ಚುಕ್ಕೆಯಾಗಿದ್ದು ಸುಳ್ಳಲ್ಲ. ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೃತ್ಯದ ಆರೋಪಿಗಳನ್ನು ಬಂಧಿಸಲು ಹೊರಟ ಪೊಲೀಸರು ಇದೀಗ ಘಟನೆ ನಡೆದು 84 ತಾಸಿನ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಆರೋಪಿಗಳು ಸೆರೆ ಸಿಕ್ಕಿದ್ದು ಎಲ್ಲರೂ ಕೂಲಿಕಾರ್ಮಿಕರು ಎಂದು ಗೊತ್ತಾಗಿದೆ.
ಹೇಗಿತ್ತು ಪೊಲೀಸರ ಕಾರ್ಯಾಚರಣೆ…?
ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ತಾಂತ್ರಿಕ ಮಾಹಿತಿಗಳನ್ನು ಮೊದಲು ಕಲೆ ಹಾಕಿದ್ದಾರೆ. ಘಚನೆ ನಡೆದ ದಿನದ ಮೊಬೈಲ್ ಸಂಖ್ಯೆಗಳನ್ನು ಗುಡ್ಡೆ ಹಾಕಿದ್ದರು. ಅನುಮಾನ ಬಂದ ಸಂಖ್ಯೆಗಳನ್ನು ಗುರುತು ಹಾಕಿಕೊಂಡಿದ್ದಾರೆ. ಒಂದೇ ಸಂಖ್ಯೆ ಕಳೆದ ಹಲವು ದಿನಗಳಿಂದ ಒಂದೇ ಸಮಯದಲ್ಲಿ ಒಂದೇ ಜಾಗದಲ್ಲಿರುವುದನ್ನು ತೋರಿಸಿದೆ.
ಹೀಗಾಗಿ ಅದೇ ಸಂಖ್ಯೆಯನ್ನು ಬೆನ್ನು ಬತ್ತಿದ್ರೆ ಅದು ಸತ್ಯಮಂಗಲದ ಕಡೆಗೆ ದಾರಿ ತೋರಿಸಿದೆ. ಹೀಗಾಗಿ ಖಚಿತ ಮಾಹಿತಯ ಮೇರೆಗೆ ತನಿಖೆ ಮುಂದುವರಿಸಿದ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ತಲೆ ಮರೆಸಿಕೊಂಡಿದ್ದು ಅವನಿಗಾಗಿ ಹುಡುಕಾಟ ನಡೆಯುತ್ತಿದೆ.
ಈ ನಡುವೆ ಆರೋಪಿಗಳು ಸಂತ್ರಸ್ಥೆ ಹಾಗೂ ಅಕೆಯ ಸ್ನೇಹಿತನ ಮೇಲೆ ನಿಗಾವಹಿಸಿದ್ದರು ಅನ್ನುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಕಳೆದ 3 ದಿನಗಳಿಂದ ಇವರಿಬ್ಬರು ಒಂದೇ ಸ್ಥಳಕ್ಕೆ ಬರುತ್ತಿದ್ದರು. ಮೂರು ದಿನವೂ ಆರೋಪಿಗಳು ಇವರನ್ನು ಫಾಲೋ ಮಾಡಿದ್ದಾರೆ. ನಾಲ್ಕನೇ ದಿನ ದುಷ್ಟರ ದಾಳಿ ನಡೆದಿದೆ.
Discussion about this post