ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ.
ಆದರೆ ಇದೇ ಕಾಂಗ್ರೆಸ್ ನಾಯಕರು ಪಿವಿ ನರಸಿಂಹ ರಾವ್, ಐಕೆ ಗುಜ್ರಾಲ್, ಸೇರಿದಂತೆ ಅನೇಕ ಮಾಜಿ ಪ್ರಧಾನಿಗಳ SPG ಭದ್ರತೆ ಹಿಂತೆಗೆದುಕೊಂಡ ಸಂದರ್ಭದಲ್ಲಿ ವಿರೋಧವನ್ನೇ ವ್ಯಕ್ತಪಡಿಸಿರಲಿಲ್ಲ.
ಕೇವಲ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆ ಹಿಂದಕ್ಕೆ ಪಡೆದ ತಕ್ಷಣ ಇವೆರೆಲ್ಲಾ ಎಚ್ಚರವಾಗಿದ್ದಾರೆ.
ಈ ಬಗ್ಗೆ ಅಮಿತ್ ಶಾ ಲೋಕಸಭೆಯಲ್ಲಿ ಬುಧವಾರ ಪ್ರಸ್ತಾಪಿಸಿದ್ದು, ಈ ಹಿಂದಿನ ಕಾಂಗ್ರೆಸ್ ಆಡಳಿತ ಎಸ್ಪಿಜಿ ಕಾಯ್ದೆಯನ್ನು ತನ್ನಗೆ ಬೇಕಾದಂತೆ ಹೇಗೆ ತಿದ್ದಿಕೊಂಡಿತು ಅನ್ನುವುದನ್ನು ವಿವರಿಸಿದ್ದಾರೆ.
running shoeದೇಶದ ಪ್ರಧಾನಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಎಸ್ಪಿಜಿಯನ್ನು ರಚಿಸಲಾಗಿತ್ತು. ಆದರೆ ಹಿಂದಿನ ಸರ್ಕಾರಗಳು ಒಂದು ಕುಟುಂಬಕ್ಕೆ ಭದ್ರತೆ ನೀಡಲು ಎಸ್ಪಿಜಿ ಕಾಯ್ದೆಗೆ ತಿದ್ದುಪಡಿ ತಂದಿದ್ದವು ಎಂದು ಕಾಂಗ್ರೆಸ್ ನಾಯಕರನ್ನು ಶಾ ಜಾಡಿಸಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿಗಳಾದ ಪಿವಿ ಎನ್, ಚಂದ್ರಶೇಖರ್, ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದಾಗ ಯಾವ ಕಾಂಗ್ರೆಸ್ ನಾಯಕನೂ ಪ್ರತಿಭಟನೆ ಮಾಡಲಿಲ್ಲ. ಈಗ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದ ತಕ್ಷಣ ಪ್ರತಿಭಟನೆ ಪ್ರಾರಂಭವಾಗಿದೆ. ದ್ವೇಷದ ರಾಜಕಾರಣ ಅನ್ನುವ ಟೀಕೆಗಳು ಕೇಳಿ ಬಂದಿದೆ. ಹಾಗಾದ್ರೆ ಈ ಹಿಂದೆ ತಾವು ಮಾಡಿದ್ದೇನು ಎಂದು ಶಾ ಪ್ರಶ್ನಿಸಿದ್ದಾರೆ.
ಹಾಗಂತ ಗಾಂಧಿ ಕುಟುಂಬದ ಸದಸ್ಯರಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆದಿಲ್ಲ. SPG ಬದಲಾಗಿ CRPF ಮೂಲಕ Z PLUS ಒದಗಿಸಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
Discussion about this post