ಬೆಂಗಳೂರು : ಲೆಕ್ಚರ್ ನನ್ನು ಭೇಟಿಯಾಗಲು ಬಂದಿದ್ದ ಶಿಷ್ಯೆಯನ್ನು, ಲೆಕ್ಚರ್ ಮಗನೇ ಪಟಾಯಿಸಿ ದೋಖಾ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದುರಂತ ಅಂದ್ರೆ ಮಗನೇ ಮಾಡಿದ ಅಕ್ರಮಕ್ಕೆ ಉತ್ತಮ ಸಮಾಜ ರೂಪಿಸಬೇಕಾದ ತಾಯಿಯೇ ಬೆಂಬಲಕ್ಕೆ ನಿಂತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಶೇಷಾದ್ರಿಪುರಂನ ಪ್ರತಿಷ್ಠ ಕಾಲೇಜು ಒಂದರಲ್ಲಿ ಆರೋಪಿ ಚಂದನ್ ತಾಯಿ ಲೆಕ್ಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅದೊಂದು ದಿನ ಲೆಕ್ಚರ್ ಭೇಟಿಯಾಗಲೆಂದು ವಿದ್ಯಾರ್ಥಿನಿ ಮನೆಗೆ ಬಂದಿದ್ದರು. ಈ ವೇಳೆ ಲೆಕ್ಚರ್ ಪುತ್ರನೊಂದಿಗೆ ವಿದ್ಯಾರ್ಥಿನಿಗೆ ಪರಿಚಯವಾಗಿತ್ತು.
ಪಾಠ ಕೇಳಲೆಂದು ಲೆಕ್ಚರ್ ಮನೆಗೆ ಹೋದವಳು ಟೀಚರ್ ಪುತ್ರ ಪ್ರೀತಿಯ ಬಲೆ ಬಿದ್ದಿದ್ದಳು. ಹೀಗಾಗಿ ಚಂದನ್ ಮತ್ತು ಆ ವಿದ್ಯಾರ್ಥಿನಿ ನಡುವೆ ಸಿಕ್ಕಾಪಟ್ಟೆ ಆತ್ಮೀಯತೆ ಬೆಳೆದಿತ್ತು. ಚಂದನ್ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ಭರವಸೆ ಬೇರೆ ಕೊಟ್ಟಿದ್ದ.
ಹೀಗಾಗಿ ಬರೀ ಪ್ರೀತಿ ಪ್ರೇಮ ಅಂದಿದ್ದವರು ಮದುವೆಗೆ ಮುಂಚೆ ಮಾಡಬಾರದ್ದನ್ನು ಮಾಡಿದ್ದಾರೆ. ಆದರೆ ಅದೇನಾಯ್ತೋ ಗೊತ್ತಿಲ್ಲ ಚಂದನ್ ವಿದ್ಯಾರ್ಥಿನಿಯಿಂದ ದೂರ ಸರಿಯಲಾರಂಭಿಸಿದ್ದಾನೆ. ಇದನ್ನು ಪ್ರಶ್ನಿಸಲು ಹೋದರೆ ಚಂದನ್ ದೈಹಿವಾಗಿ ಹಲ್ಲೆ ಮಾಡಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದೆ.
ಮಾತ್ರವಲ್ಲದೆ ನ್ಯಾಯ ಕೇಳಲು ಪಾಠ ಮಾಡಿದ ಟೀಚರ್ ಅಂದ್ರೆ ಚಂದನ್ ತಾಯಿ ಬಳಿ ಹೋದರೆ ಅವರು ಕೂಡಾ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
ಹೀಗಾಗಿ ಇದೀಗ ವಿದ್ಯಾರಣ್ಯಪುರ ಪೋಲೀಸ್ ದೂರು ದಾಖಲಿಸಿರುವ ವಿದ್ಯಾರ್ಥಿನಿ ಪ್ರೀತಿ ಪ್ರೇಮದ ಹೆಸರಿನಲ್ಲಿ ನನ್ನನ್ನು ಸುತ್ತಾಡಿಸಿದ್ದ ಚಂದನ್ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಹೀಗಾಗಿ ಎರಡೆರಡು ಬಾರಿ ಗರ್ಭಪಾತ ಕೂಡಾ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ದೂರಿನಂತೆ ಕ್ರಮ ಕೈಗೊಂಡಿರುವ ಪೊಲೀಸರು ಚಂದನ್ ನನ್ನು ಬಂಧಿಸಿದ್ದಾರೆ.
Discussion about this post