ಶುಕ್ರವಾರ ಬೆಂಗಳೂರಿನಲ್ಲಿ ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಸಿಡಿಯೊಂದನ್ನು ಮಾಜಿ ಸಿಎಂ ಬಿಡುಗಡೆ ಮಾಡಿದ್ದರು.
ಪೊಲೀಸರೇ ಗಲಭೆಗೆ ಕಾರಣ, ಮಂಗಳೂರು ಪೊಲೀಸ್ ಆಯುಕ್ತರೇ ಇವಕ್ಕೆಲ್ಲಾ ನೇರ ಹೊಣೆ ಅನ್ನುವುದು ಅವರ ಆರೋಪವಾಗಿತ್ತು. ಆದರೆ ಅವರು ಕೊಟ್ಟ ವಿಡಿಯೋ ಬಗ್ಗೆ ಅನುಮಾನಗಳು ಹಾಗೇ ಇತ್ತು. ಜಲ್ಲಿ ಕಲ್ಲು ಹೊತ್ತ ಬಂದ ಲಾರಿ, ಸಿಸಿಟಿವಿಯ ದಿಕ್ಕು ಬದಲಾಯಿಸಿದ ದುಷ್ಕರ್ಮಿಗಳು, ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ಎಸೆದವರ ಬಗ್ಗೆ ಕುಮಾರಸ್ವಾಮಿ ಚಕಾರವೆತ್ತಿರಲಿಲ್ಲ.
ಆದರೆ ಇದೀಗ ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ ಗಲಭೆ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸಾಕ್ಷಿಯಾಗಿ ಬಿಟ್ಟಿದೆ. ಪೊಲೀಸರ ಕೈಗೆ ಸಿಗದ ಹಲವು ವಿಡಿಯೋಗಳು ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಸಿಡಿಯಲ್ಲಿತ್ತು. 35 ಕ್ಲಿಪ್ ಗಳ ಪೈಕಿ ಹಲವು ಕ್ಲಿಪ್ ಗಳು ಪೊಲೀಸರ ಕೈಗೆ ಸಿಕ್ಕಿಯೇ ಇರಲಿಲ್ಲ.
ಹೀಗಾಗಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಡಿಯನ್ನು ಪರಿಶೀಲನೆ ನಡೆಸಿರುವ ಮಂಗಳೂರು ಪೊಲೀಸರು ಅಲ್ಲಿ ಗಲಭೆಗೆ ಸಾಥ್ ನೀಡಿದ ಅನೇಕರನ್ನು ಗುರುತಿಸಿದ್ದಾರೆ. ಪೊಲೀಸರ ಕೈಗೆ ನಾವು ಸಿಕ್ಕಿ ಹಾಕಿಕೊಳ್ಳದೇ ಪಾರಾದೆವು ಎಂದು ಬೀಗುತ್ತಿದ್ದ ಭಸ್ಮಾಸುರರನ್ನು ಗುರುತಿಸಲು ಕುಮಾರಸ್ವಾಮಿ ಸಿಡಿ ಸಹಾಯ ಮಾಡಿದೆ.
ಹೀಗಾಗಿ ಇದೀಗ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಯ ಪ್ರತಿಯೊಂದು ಕ್ಲಿಪಿಂಗ್ ಅನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಅವರು ದೃಶ್ಯದಲ್ಲಿ ನಡೆಸುತ್ತಿರುವ ವಿದ್ವಂಸಕ ಕೃತ್ಯಗಳನ್ನು ಪರಿಶೀಲನೆ ನಡೆಸಿ ಇತರೇ ಫೂಟೇಜ್ ಗಳೊಂದಿಗೆ ತಾಳೆ ಮಾಡುತ್ತಿದ್ದಾರೆ.
ಅಲ್ಲಿಗೆ ಮಂಗಳೂರು ಗಲಭೆಯ ಭಸ್ಮಾಸುರರನ್ನು ಗುರುತಿಸಲು ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿಗಳಿಗೆ ಕರಾವಳಿಯ ಶಾಂತಿ ಪ್ರಿಯರು ಧನ್ಯವಾದ ಹೇಳಲೇಬೇಕು.
Discussion about this post