ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ ಖುಷಿ ಒಂದು ಕಡೆಯಾದರೆ, ಮಳೆಯ ಕಾರಣಕ್ಕೆ ನಿಂತು ಹೋಯ್ತಲ್ಲ ಅನ್ನುವ ಬೇಸರ ಮತ್ತೊಂದು ಕಡೆ.
ಈ ನಡುವೆ ಭಾರತ ಪಾಕ್ ಪಂದ್ಯದ ವೇಳೆ ಕರಾವಳಿ ತುಳು ಭಾಷೆಯೂ ಸಾಕಷ್ಟು ಸದ್ದು ಮಾಡಿದೆ.
ಭಾರತ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಗ್ಯಾಲರಿಯಲ್ಲಿ ಕೂತಿದ್ದ “ ಕುಡ್ಲದಕ್ಲು” ಕೆಎಲ್ ರಾಹುಲ್ ಅವರನ್ನು ತುಳುವಿನಲ್ಲೇ ಮಾತನಾಡಿಸಿದ್ದಾರೆ.
“ ರಾಹುಲ್ ಇಂಚ ಉಲ್ಲರ್” ( ರಾಹುಲ್ ಹೇಗಿದ್ದೀರಾ), “ಸೆಂಚುರಿ ಬೋಡು ( ಶತಕ ಬೇಕು ) , ಕುಡ್ಲರ್ದ್ ಬೈದ ( ಮಂಗಳೂರಿನಿಂದ ಬಂದಿದ್ದೇವೆ) ಈ ಮಾತಿಗೆ ಕೈ ಭಾಷೆಯಲ್ಲೇ ಉತ್ತರಿಸಿದ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಸ್ಪಂದಿಸಿದ್ದಾರೆ.
Discussion about this post