ಬೆಂಗಳೂರು : ಕೋರಮಂಗಲದಲ್ಲಿ ನಡೆದ ಆಡಿ ಕಾರು ಆಕ್ಸಿಡೆಂಟ್ ನಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಸೇಫ್ಟಿಗೆ ಹೆಸರಾಗಿರುವ ಹಾಗಾದ್ರೆ ಆಡಿ ಕಾರು ಕೂಡಾ ಸೇಷ್ಟಿ ಅಲ್ವಾ ಅನ್ನುವ ಪ್ರಶ್ನೆ ಎದ್ದಿದೆ. ಸೇಫ್ಟಿಗೆ ಹೆಸರಾಗಿರುವ ಆಡಿ ಕಾರಿನಲ್ಲಿರುವ ಏರ್ ಬ್ಯಾಗ್ ಗಳು ಅದ್ಯಾಕೆ ತೆರೆದುಕೊಳ್ಳಲಿಲ್ಲ ಅನ್ನುವ ಪ್ರಶ್ನೆ ಎದ್ದಿದೆ.
ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಉತ್ತರಿಸಿದ್ದು, ಸಂಚಾರಿ ನಿಯಮಗಳನ್ನು ಪಾಲಿಸದೆ ಕಾರು ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಅಂದಿದ್ದಾರೆ. ಜೊತೆಗೆ ಕಾರಿನಲ್ಲಿದ್ದ ಯಾರೊಬ್ಬರೂ ಕೂಡಾ ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ. ಹೀಗಾಗಿ ಅಪಘಾತದ ವೇಳೆ ಏರ್ ಬ್ಯಾಗ್ ಒಪನ್ ಆಗಲಿಲ್ಲ.
ಇನ್ನು ಅಪಘಾತ ಹೇಗಾಯ್ತು ಅನ್ನುವ ಬಗ್ಗೆ ರವಿಕಾಂತೇಗೌಡ ಅವರು ಉತ್ತರಿಸಿದ್ದು, ಮೊದಲು ಅತೀ ವೇಗದಲ್ಲಿದ್ದ ಕಾರು ಫುಟ್ ಪಾತ್ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲೂ ನಿಯಂತ್ರಣಕ್ಕೆ ಸಿಗದ ಕಾರು ಪಕ್ಕದ ಕಟ್ಟಡದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಅಂದಿದ್ದಾರೆ.
Discussion about this post