ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ.
ಸೋಲಿನ ಕಹಿಯ ನಡುವೆ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮಾಡಿರುವ ಟ್ವೀಟ್ ಕ್ರಿಕೆಟ್ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ..
ಸೋಲಿನ ಪರಿವೇ ಇಲ್ಲ ಅನ್ನುವಂತೆ ಕೆಎಲ್ ರಾಹುಲ್ ತಮ್ಮ ಸಹ ಆಟಗಾರ ಇಶಾಂತ್ ಶರ್ಮಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಟೀಂ ಇಂಡಿಯಾದ ಸೋಲಿನಿಂದ ಕೋಪಗೊಂಡಿದ್ದ ಕ್ರಿಕೆಟ್ ಅಭಿಮಾನಿಗಳ ಸಿಟ್ಟು ನೆತ್ತಿಗೇರಿದ್ದು ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ,
ವಿದೇಶಿ ಪಿಚ್ ನಲ್ಲಿ ಆಡಲು ರಾಹುಲ್ ಅನರ್ಹ. ದುಡ್ಡಿನ ಹಿಂದೆ ಓಡುವ ಟೀಂ ಇಂಡಿಯಾ ಆಟಗಾರರಿಗೆ ಸೋಲು ಬೇಸರವೇ ತರಿಸಿಲ್ಲ. ರಾಹುಲ್ ಮಾಡೆಲ್ ಗೆ ಮಾತ್ರ ಸೂಕ್ತ ಎಂದೆಲ್ಲಾ ಕಿಡಿ ಕಾರುತ್ತಿದ್ದಾರೆ.ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನದಿಂದ ಭಾರತ ಸೋತಿತು, ಆದರೆ ರಾಹುಲ್ ಇದರ ಪರಿವೆ ಇಲ್ಲದಾಯ್ತೇ.
ಸೋತ ಮಾತ್ರಕ್ಕೆ ಸಹ ಆಟಗಾರನಿಗೆ ಶುಭಾಶಯ ಕೋರ ಬಾರದು ಎಂದಿದೆಯೇ…..ಅಭಿಮಾನಿಗಳೇ ಉತ್ತರಿಸಬೇಕು
Discussion about this post