ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಅವರಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು.
ಈ ವೇಳೆ ಕಿಚ್ಚ ಸುದೀಪ್ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನಿಸಿದ್ದಾರೆ.
ಸನ್ಮಾನದ ಬಳಿಕ ಮಾತನಾಡಿದ ಸುದೀಪ್ ತಮ್ಮ ಸಿನಿ ಜರ್ನಿಯನ್ನು ತಿದ್ದಿ ತೀಡಿದವರನ್ನು ನೆನಪಿಸಿಕೊಂಡರು.
ತಮ್ಮ ಸಿನಿ ಜರ್ನಿಯಲ್ಲಿ ಫಾಲೋ ಮಾಡಿದವರಿಗೆ ನಮನ ಸಲ್ಲಿಸಿದರು.
ವಿಷ್ಣು ಸರ್ ಅವರಿಂದ ಗತ್ತಲ್ಲಿ ಇರೋದು ಹೇಗೆ ಗತ್ತಿನಲ್ಲಿ ಒಬ್ಬ ಕಲಾವಿದ ಹೇಗಿರಬೇಕು ಅನ್ನುವುದನ್ನು ಕಲಿತೆ, ಪ್ರೀತಿ ಮಾಡೋದು ಹೇಗೆ, ಒಂದು ಸಿನಿಮಾವನ್ನು ಎಷ್ಟು ಸುಂದರವಾಗಿ ತೋರಿಸಬಹುದು, ಒಂದು ಸೀನ್ ನಲ್ಲಿ ಏನೆಲ್ಲಾ ಮಾಡಬಹುದು ಅನ್ನೋದನ್ನ ರವಿಚಂದ್ರನ್ ಅವರಿಂದ ಕಲಿತೆ,
ಎನರ್ಜಿ ಅಂದ್ರೆ ಏನು, ಹೀರೋಯಿಸಂ ಅಂದ್ರೆ ಏನು ಅನ್ನೋದನ್ನ ಶಿವಣ್ಣ ಅವರಿಂದ ಕಲಿತೆ ಎಂದು ಸುದೀಪ್ ಹೇಳಿದ್ದಾರೆ.
ಇದೇ ವೇಳೆ ಉಪೇಂದ್ರ ಅವರಿಂದ ಕಲಿತಿರುವ ಪಾಠಗಳನ್ನು ವಿಶೇಷವಾಗಿ ನೆನಪಿಸಿಕೊಂಡ ಸುದೀಪ್, ನಾನು ಕಲಾವಿದ ಆಗಬಹುದು ಎಂದು ತೋರಿಸಿಕೊಟ್ಟಿದ್ದೇ ಅವರು. ಸಹ ನಿರ್ದೇಶಕ- ನಿರ್ದೇಶಕನಾಗಬೇಕು ಎಂದು ಓಡಾಡುವಾಗ ಉಪೇಂದ್ರ ನೀವು ಇಷ್ಟೆಲ್ಲ ಇಟ್ಟುಕೊಂಡು ನಿರ್ದೇಶಕನಾಗ್ತೀನಿ ಅಂತೀರಲ್ಲ. ಹೋಗಿ ಹೀರೋ ಆಗಿ ಅಂದಿದ್ರು. ಅವತ್ತಿಗೆ ಆ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡೆ.
ನಾನು ನಟನಾಗಬಹುದು ಎಂದು ಮೊದಲು ಗುರುತಿಸಿದ್ದೇ ಅವರು. ನಿರ್ದೇಶನ ಮಾಡೋದಕ್ಕೂ ಅವರ ಸ್ಫೂರ್ತಿ ಇದೆ ಎಂದರು.
Discussion about this post