ಬೆಂಗಳೂರು : ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಕಾಮಲೀಲೆಯ ಸಿಡಿಯ ತನಿಖೆ ಕೈಗೆತ್ತಿಕೊಂಡಿರುವ ಎಸ್ಐಟಿ 5 ಮಂದಿಯನ್ನು ವಶಕ್ಕೆ ಪಡೆದಿದೆ.
ಆದರೆ ತನಿಖೆಯ ಪ್ರಾರಂಭ ಎಲ್ಲಿಗೋ ತಲುಪುತ್ತದೆ ಅಂದುಕೊಳ್ಳಲಾಗಿತ್ತು. ಆದರೆ ಬಳಿಕ ನಡೆದ ಬೆಳವಣಿಗೆಗಳನ್ನು ನೋಡಿದರೆ ಎಚ್.ವೈ. ಮೇಟಿ ಸಿಡಿ ಪ್ರಕರಣದ ತನಿಖೆಯಂತೆ ಮುಚ್ಚಿ ಹೋಗಲಿದೆ ಅನ್ನುವ ಮಾತುಗಳು ಕೇಳಿ ಬಂದಿದೆ.
ಈ ನಡುವೆ ಎಸ್ಐಟಿ ಪೊಲೀಸರು ವಿಚಾರಣೆಗೆ ಕರೆದಿರುವ ಐವರ ಗುರುತು ಪತ್ತೆಯಾಗಿದೆ.
ಪ್ರಸ್ತುತ ಮಾಹಿತಿಗಳ ಪ್ರಕಾರ ವಿಚಾರಣೆ ಎದುರಿಸುತ್ತಿರುವ ಐವರಿಗೂ ಸಿಡಿ ಬಿಡುಗಡೆಗೂ ನಂಟಿದೆ ಎಂದು ಗೊತ್ತಾಗಿದೆ.
ಎಸ್ಐಟಿ ವಿಚಾರಣೆ ಎದುರಿಸುತ್ತಿರುವ ಐವರ ಪೈಕಿ ಮೊದಲನೇಯವರದ್ದು ಬೆಂಗಳೂರು ಮೂಲ. ಯಶವಂತಪುರದ ನಿವಾಸಿಯಾಗಿರುವ ಇವರು, ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಎರಡನೇಯವರು ವಿಡಿಯೋ ಎಡಿಟರ್, ವಿಜಯನಗರದ ಇವರು ಇದೇ ವಿಡಿಯೋವನ್ನು ಎಡಿಟ್ ಮಾಡಿದ್ದರು ಎನ್ನಲಾಗಿದೆ.
ಮೂರನೇಯವರು ಸಿಡಿಗೆ ಸ್ರ್ಕಿಪ್ಟ್ ಬರೆದು ವಾಯ್ಸ್ ಕೊಟ್ಟ ವ್ಯಕ್ತಿ. ಚಿಕ್ಕಮಗಳೂರಿನ ಆಲ್ದೂರು ಮೂಲದ ಈ ವ್ಯಕ್ತಿಯನ್ನು ಕೂಡಾ ವಿಚಾರಣೆ ನಡೆಸಲಾಗುತ್ತಿದೆ.
ನಾಲ್ಕನೇಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ. ಚಾಮರಾಪೇಟೆ ಮೂಲದ ಇವರು ಸಿಡಿ ಬಿಡುಗಡೆ ತಂಡದಲ್ಲಿದ್ದರು ಎಂದು ಗೊತ್ತಾಗಿದೆ.
ಐದನೇಯವರು ಮಹಿಳೆಯಾಗಿದ್ದು, ಕಲ್ಲಹಳ್ಳಿಗೆ ಸಿಡಿ ಹಸ್ತಾಂತರಿಸುವ ಸಂದರ್ಭದಲ್ಲಿ ಯುವಕನ ಜೊತೆಗಿದ್ದಳು. ಈ ಯುವತಿಯ ಬಳಿ ಸಿಡಿಯ ಕುರಿತಂತೆ ದೊಡ್ಡ ದೊಡ್ಡ ಮಾಹಿತಿಗಳು ಹೊರ ಬರುವ ಸಾಧ್ಯತೆಗಳು ಇದೆ ಎನ್ನಲಾಗಿದೆ.
Discussion about this post