ಸ್ವೀಕರ್ ರಮೇಶ್ ಕುಮಾರ್ ಬಗ್ಗೆ ರಾಜ್ಯದ ಜನತೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದರು. ರಮೇಶ್ ಕುಮಾರ್ ಸದನದ ಹೆಡ್ ಮಾಸ್ಟರ್ ಆಗಿ ಬಂದಿದ್ದಾರೆ ಅಂದ ಮೇಲೆ ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಅನ್ನುವ ವಿಶ್ವಾಸವಿತ್ತು.
ಆದರೆ ಇದೀಗ ಕೆಜಿ ಬೋಪಯ್ಯ ಮತ್ತು ರಮೇಶ್ ಕುಮಾರ್ ಅವರ ಕಾರ್ಯವೈಖರಿಯಲ್ಲಿ ವ್ಯತ್ಯಾಸವಿರಬಹುದು ಆದರೆ ಅವರ ಗುರಿ ಆಯಾ ಕಾಲಕ್ಕೆ ಅನುಗುಣವಾಗಿ ಒಂದೇ ಆಗಿತ್ತು ಅನ್ನುವುದು ಸ್ಪಷ್ಟವಾಗಿದೆ.
ವಿಶ್ವಾಸ ಮತ ಗೊತ್ತುವಳಿ ಕುರಿತ ಚರ್ಚೆಗೆ ಸೋಮವಾರ ತೆರೆ ಎಳೆಯುವುದಾಗಿ ಸ್ಪೀಕರ್ ಹೇಳಿದ್ದರು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸೋಮವಾರ ಎಲ್ಲ ವಿಷಯಕ್ಕೂ ಅಂತ್ಯ ಅಂದಿದ್ದರು. ಸ್ಪೀಕರ್ ರಮೇಶ್ ಅವರು ಕೂಡಾ ಸೋಮವಾರವೇ ಕಡೇ ಆಟ ಅಂದಿದ್ದರು.
ಮಹಿಳೆಯರ ಉಡುಪು ಖರೀದಿಗೆ ಬಂಪರ್ ಆಫರ್
ಆದರೆ ಸೋಮವಾರ ರಾತ್ರಿ ಗಂಟೆ 12 ಸಮೀಪಿಸಿದರೂ ವಿಶ್ವಾಸ ಮತ ಸಾಬೀತು ಆಗಲೇ ಇಲ್ಲ. ಬಿಜೆಪಿ ಇಂದೇ ವಿಶ್ವಾಸ ಮತ ಸಾಬೀತಾಗಲಿ ಅಂದ್ರೆ ಕಾಂಗ್ರೆಸ್ ಮಂಗಳವಾರ 8 ಗಂಟೆ ತನಕ ಸಮಯ ಕೇಳಿತು. ಸ್ಪೀಕರ್ ರಮೇಶ್ ಕುಮಾರ್ ಅವರು ಆಗೋದೇ ಇಲ್ಲ, ಸಂಜೆ 4 ಗಂಟೆ ಬಳಿಕ 1 ನಿಮಿಷ ಕಳೆದರೂ ನಾನು ಚೆಯರ್ ಮೇಲೆ ಕೂರುವುದಿಲ್ಲ ಅಂದರು. ಇದರಿಂದ ಗಾಬರಿಗೊಂಡ ಮೈತ್ರಿ ಪಾಳಯ ಸಂಜೆ 6 ಗಂಟೆ ತನಕ ಕಾಲ ಕೋರಿತು. ಆದೇನಾಯ್ತೋ ಗೊತ್ತಿಲ್ಲ ಸ್ಪೀಕರ್ ರಮೇಶ್ ಕುಮಾರ್ 4 ಗಂಟೆ ತನಕ ವಿಧಿಸಿದ್ದ ಗಡುವನ್ನು 6 ಗಂಟೆಗೆ ವಿಸ್ತರಿಸಿದರು. ಅಲ್ಲಿಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲಿಟ್ಟಿದ್ದ ವಿಶ್ವಾಸ ನಾಶವಾಗಿ ಹೋಯ್ತು.
ನಿಮ್ಮ ಮಕ್ಕಳು ಶಾಲೆಗೆ ಹೋಗ್ತಾರ…?
ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಅನರ್ಹಗೊಳಿಸುವ ಕುರಿತಂತೆ ಸ್ಪೀಕರ್ ಅವರು ಅವರ ಇಚ್ಛೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಬಹುದು. ಸುಪ್ರೀಂಕೋರ್ಟ್ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ಸ್ಪೀಕರ್ ಅವರ ಕಾರ್ಯವ್ಯಾಪ್ತಿಯಲ್ಲಿ ತಾವು ಕೈಯಾಡಿಸುವುದಿಲ್ಲ ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಹೀಗಾಗಿ ಸ್ಪೀಕರ್ ರಮೇಶ್ ಆ ವಿಷಯದಲ್ಲಿ ಸರ್ವ ಸ್ವತಂತ್ರರು. ಆದರೆ ವಿಶ್ವಾಸ ಮತ ಯಾಚನೆಗೆ ನಿಗದಿ ಮಾಡಿದ ಗಡುವನ್ನು ಶಾಸನಸಭೆ ಹಲವು ಸಲ ಮುರಿಯುತ್ತದೆ ಅನ್ನುವುದಾದರೆ, ರಾಜ್ಯದ ಜನ ಭರವಸೆಗಳನ್ನು, ಕೊಟ್ಟ ಮಾತುಗಳನ್ನು ಮುರಿಯುವುದೇ ತಪ್ಪೇ. ಹಲವು ಕಾರಣಗಳನ್ನು ಕೊಟ್ಟು ಅನೇಕ ವಿಷಯಗಳನ್ನು ಮುಂದೂಡಬಹುದು ತಾನೇ. ವಿಶ್ವಾಸ ಮತಕ್ಕೆ ಹಲವು ಸಲ ಗಡುವು ಫಿಕ್ಸ್ ಮಾಡಬಹುದಾದರೆ, ಬ್ಯಾಂಕ್ ಗೆ ಕಟ್ಟಬಹುದಾದ ಸಾಲಕ್ಕೂ ರೈತನಿಗೂ ಹತ್ತಾರು ಗಡುವು ಕೊಡಬಹುದಲ್ವ. ಶಾಲೆಯ ಫೀಸು ಕಟ್ಟಲು ಅಸಾಧ್ಯವಾದರೆ ಹತ್ತಾರು ಗಡುವು ಕೊಡಬಹುದಲ್ವ. ಪಡಿತರ ಅಂಗಡಿಯ ಅಕ್ಕಿ ಖರೀದಿಗೆ ದುಡ್ಡಿಲ್ಲ ಅಂದವರಿಗೆ ಹತ್ತಾರು ಗಡುವು ಕೊಡಬಹುದಲ್ವ, ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಕಟ್ಟಲು ಹತ್ತಾರು ಗಡುವು ಕೊಡಬಹುದಲ್ವ. ಶಾಸನ ಸಭೆಯ ಮಂದಿಗೆ ಸಿಗಬಹುದಾದ ವಿನಾಯತಿ ರಾಜ್ಯದ ಜನತೆಗೆ ಯಾಕಿಲ್ಲ ಸ್ಪೀಕರ್ ಸಾರ್.
4 ಗಂಟೆಗೆ ವಿಶ್ವಾಸ ಮತ ಕೇಳಲೇಬೇಕು ಅಂದ ಸ್ಪೀಕರ್, ಸಿದ್ದರಾಮಯ್ಯ ಅವರ 6 ಗಂಟೆಗೆ ಅಂದ ತಕ್ಷಣ ಒಪ್ಪಿಕೊಳ್ತಾರೆ ಅಂದ್ರೆ ಅರ್ಥವೇನು.? ವಿಶ್ವಾಸ ಮತ ಯಾಚನೆಯ ಗಡುವು ಹಲವು ದಿನಗಳಿಂದ ವಿಸ್ತರಣೆಯಾಗುತ್ತಿದೆ. ಮಂಗಳವಾರ ಸುಪ್ರೀಂಕೋರ್ಟ್ ‘ಕರ್ ನಾಟಕ’ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡರೆ ಸರಿ, ಇಲ್ಲವಾದರೆ ನಾಳೆಯೂ ವಿಶ್ವಾಸ ಮತ ಯಾಚನೆ ಆಗುವುದು ಅನುಮಾನ.
ಒಟ್ಟಿನಲ್ಲಿ ಭರವಸೆ ಇಟ್ಟುಕೊಂಡಿದ್ದ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಭರವಸೆ ಕಳೆದುಕೊಂಡಿದ್ದಾರೆ. ವಚನ ಭ್ರಷ್ಟ ಅನ್ನುವ ಬಿರುದನ್ನು ಬಿಜೆಪಿಯವರಿಂದ ಪಡೆದುಕೊಂಡಿರುವ ಸಿಎಂ ಕುಮಾರಸ್ವಾಮಿ ಮತ್ತೇ ಆದೇ ಬಿರುದಿಗೆ ಆರ್ಹತೆಯನ್ನೂ ಪಡೆದಿದ್ದಾರೆ.
ರಾಜ್ಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಿ ಬನ್ನಿ ಅಂದ್ರೆ ಸದನ 12 ಗಂಟೆ ತನಕ ನಡೆಯಲು ಸಾಧ್ಯವೇ ಇರಲಿಲ್ಲ. ಆದರೆ ಅಧಿಕಾರ ಅನ್ನುವ ಆಸೆಗೆ ಹಸಿವು, ನಿದ್ದೆ, ಕ್ಷೇತ್ರದ ಜನತೆ ಅನ್ನುವ ಕಾಳಜಿ ಮರೆಯಾಗಿದ್ದು ದುರಂತವೇ ಸರಿ.
ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗದಿದ್ದರೇ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
Discussion about this post