Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಟೋಲ್ ಗಳಲ್ಲಿ ಓಡಾಡಲು ಶಾಸಕರಿಗೆ ಪ್ರತ್ಯೇಕ ಲೇನ್….ಹಾಗಾದ್ರೆ ಜನ ಸಾಮಾನ್ಯನ ಕಥೆ

Radhakrishna Anegundi by Radhakrishna Anegundi
September 16, 2021
in ನ್ಯೂಸ್ ರೂಮ್
annadani
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆ, ಕರ್ನಾಟಕದ ನೆಲ ಜಲದ ಕುರಿತಂತೆ ಚರ್ಚಿಸಲು ಕರೆದಿದ್ದ ಅಧಿವೇಶನದಲ್ಲಿ ಶಾಸಕರ ವೈಯುಕ್ತಿಕ ಸಮಸ್ಯೆಯ ಬಗ್ಗೆ ಚರ್ಚೆ ನಡೆದ ಘಟನೆ ಬುಧವಾರ ಜರುಗಿದೆ.

ಟೋಲ್ ಗಳಲ್ಲಿ ಶಾಸಕರಿಗೆ ಕಿರಿ ಕಿರಿ ನೀಡಲಾಗುತ್ತಿದೆ ಎಂದು ವಿಷಯ ಪ್ರಸ್ತಾಪಿಸಿದ ಶಾಸಕ ಅನ್ನದಾನಿ, ಟೋಲ್ ಗಳಲ್ಲಿ ವಿಐಪಿಗಳ ಸಂಚಾರಕ್ಕೆ ಪ್ರತ್ಯೇಕ ಪಥವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವರು, ವಿಐಪಿ ಲೇನ್ ಅಂತಾ ಇಲ್ಲ, ಅಂಬ್ಯುಲೆನ್ಸ್ ಗಳು ಓಡಾಡುವ ಪಥದಲ್ಲಿ ವಿಐಪಿಗಳು ಓಡಾಟ ನಡೆಸಬಹುದು ಅಂದರು.

ಸಚಿವರ ಉತ್ತರದಿಂದ ತೃಪರಾಗದ ಕೆ ಅನ್ನದಾನಿ ಶಾಸಕರಿಗೆ ಪಾಸ್ ಕೊಟ್ಟಿದ್ದೀರಿ, ಯಾಕೆ ಕೊಟ್ಟಿದ್ದೀರಿ, ಪಾಸ್ ಗಳನ್ನು ಟೋಲ್ ಗಳಲ್ಲಿ ತೋರಿಸಿದ್ರೆ ಸ್ಕ್ಯಾನ್ ಮಾಡಬೇಕು ಅಂತಾರೆ, ಐಡಿ ಕಾರ್ಡ್ ತೋರಿಸಿ ಅಂತಾರೆ. ನಾನೇ ಶಾಸಕ ಕೂತಿದ್ದೇನೆ ಅಂದರೂ ಸಿಬ್ಬಂದಿಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ನಮ್ಮ ಸಮಯ ವ್ಯರ್ಥವಾಗುತ್ತಿದೆ. ನಮಗೆ ಕಿರಿ ಕಿರಿಯಾಗುತ್ತಿದೆ. ಸಮಸ್ಯೆಯಾಗುತ್ತಿದೆ ಎಂದು. ತಕ್ಷಣ ಸಮಸ್ಯೆ ಬಗೆ ಹರಿಸಿ ಅಂದರು.

ಈ ಬಗ್ಗೆ ಸಚಿವರು ಸಮಸ್ಯೆ ಬಗ್ಗೆ ಹರಿಸುವ ಬಗ್ಗೆ ಉತ್ತರಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಸಕ ಶಿವಲಿಂಗೇಗೌಡರು, ನಮಗೂ ಮರ್ಯಾದೆ ಇದೆ, ಕಾಸು ಕೊಟ್ಟು ಹೋಗ್ತಿವಿ. ಸುಮ್ನೆ ಪಾಸ್ ಗಳು ಯಾಕೆ ಬೇಕು ವಾಪಾಸ್ ತೆಗೆದುಕೊಳ್ಳಿ ಅಂದರು. ಅಷ್ಟಕ್ಕೆ ಮಾತು ನಿಲ್ಲಿಸದ ಶಿವಲಿಂಗೇಗೌಡರು, ಜನಪ್ರತಿನಿಧಿಗಳಿಗೆ ಪ್ರತ್ಯೇಕ ಲೇನ್ ನಿರ್ಮಿಸಿಕೊಡಿ ಅನ್ನುವ ಬೇಡಿಕೆ ಇಟ್ಟರು.

annadni

ಆಗ್ಲೂ ಈ ವಿಷಯದ ಬಗ್ಗೆ ಅನ್ನದಾನಿ ಮತ್ತೆ ಮಾತು ಮುಂದುವರಿಸಿದರು, ಇದು ಸ್ಪೀಕರ್ ಕಾಗೇರಿಯವರ ಸಹನೆ ಕೆಡಿಸಿತು. ಆಗ ಗರಂ ಆಗಿಯೇ ಮಾತನಾಡಿದ ಸ್ಪೀಕರ್, 6 ಕೋಟಿ ಜನರ ಬಗ್ಗೆ ನಾವು ಚರ್ಚಿಸಬೇಕಿದೆ. 224 ಶಾಸಕರ ಸಮಸ್ಯೆ ಇಲ್ಲಿ ವಿಷಯವಲ್ಲ. ಈ ಬಗ್ಗೆ ನನ್ನದೇ ಕಚೇರಿಯಲ್ಲೇ ಸಭೆ ಕರೆದು ಸಮಸ್ಯೆ ಬರೆ ಹರಿಸೋಣ ಎಂದು ಕಲಾಪ ಮುಂದುವರಿಸಿದರು.

ಜನಪ್ರತಿನಿಧಿಗಳ ಈ ಬೇಡಿಕೆ ಅಚ್ಚರಿ ಮೂಡಿಸಿದೆ. ದೇಶದಲ್ಲಿ ಜನಪ್ರತಿನಿಧಿಗೊಂದು, ಜನರಿಗೊಂದು ಕಾನೂನು ಇಲ್ಲ, ಅಂದ ಮೇಲೆ ಟೋಲ್ ಗಳಲ್ಲೂ ಜನ ಸಾಮಾನ್ಯರಂತೆ ಜನಪ್ರತಿನಿಧಿಗಳು ಹೋಗಬೇಕು ತಾನೇ. ಇನ್ನು ಜನಪ್ರತಿನಿಧಿಗಳು ಅಂದ ಮೇಲೆ ಐಡಿ ಕಾರ್ಡ್ ತೋರಿಸಬಾರದು ಅಂತಾ ಇದೆಯೇ,  ಶಾಸಕರ ಹೆಸರಿನಲ್ಲಿ ದುರುಪಯೋಗವಾಗಬಾರದು ಅನ್ನುವ ಕಾರಣಕ್ಕೆ ಟೋಲ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಯಾದವನು ಜನರ ಸೇವಕನಾಗಿರಬೇಕೇ ಹೊರತು ವಿಐಸಿ ಸಂಸ್ಕೃತಿಯ ದಾಸನಾಗಬಾರದು.

kageri
ಟೋಲ್ ಗಳಲ್ಲಿ ಓಡಾಡಲು ಶಾಸಕರಿಗೆ ಪ್ರತ್ಯೇಕ ಲೇನ್....ಹಾಗಾದ್ರೆ ಜನ ಸಾಮಾನ್ಯನ ಕಥೆ 1
Tags: MAIN
ShareTweetSendShare

Discussion about this post

Related News

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ

Zika Virus  : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?

Shashi Kumar BJP  : ಚಿತ್ರನಟ ಶಶಿಕುಮಾರ್ ಬಿಜೆಪಿಗೆ :  ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್

Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್

lokayukta : ಮೊದಲು ಎಸಿಬಿ ಈಗ ಲೋಕಾಯುಕ್ತ : ಬೆಸ್ಕಾಂ ಎಇ ತಿಂದು ತೇಗಿದೆಷ್ಟು..?

Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್