ಬೆಂಗಳೂರು : ವುಹಾನ್ ವೈರಸ್ ನ ಮೂರನೇ ಅಲೆ ಈ ಬಾರಿ ಕರ್ನಾಟಕಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಸಪ್ಟೆಂಬರ್ 10ರ ವೇಳೆಗೆ ಭಾರತದ ಕೊರೋನಾ ಸೋಂಕಿತರ ಸಂಖ್ಯೆ 32.8 ಕೋಟಿಗೆ ತಲುಪಲಿದ್ದು, ಎನಿಲ್ಲ ಅಂದರೂ 4.40 ಲಕ್ಷದ ಗಡಿಗೆ ಸಾವಿನ ಸಂಖ್ಯೆ ತಲುಪಲಿದೆ. ಇನ್ನು ಇದೇ ಸಂಶೋಧನೆ ಕನ್ನಡಿಗರೇ ಎಚ್ಚರಕವಾಗಿರಿ ಸಪ್ಟಂಬರ್ ತಿಂಗಳಲ್ಲಿ ಕರ್ನಾಟಕಕ್ಕೆ ಕಾದಿದೆ ಕಂಟಕ ಎಂದು ಹೇಳಿದೆ.
ಇನ್ನು ಕರ್ನಾಟಕ ಕೇವಲ ಐದರಿಂದ ಆರು ವಾರಗಳ ಅವಧಿಯಲ್ಲಿ, ಕರ್ನಾಟಕವು 6 ಲಕ್ಷ ಸಕ್ರಿಯ ಪ್ರಕರಣಗಳನ್ನು ಕಂಡಿದೆ. ಹೀಗಾಗಿ ಇನ್ನು ಒಂದೇ ಒಂದು ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29.50 ಲಕ್ಷ ಮತ್ತು ಸಾವಿನ ಸಂಖ್ಯೆ 37, 470 ದಾಟಬಹುದು ಎಂದು ಜೀವನ್ ರಕ್ಷ ಸಂಸ್ಥೆ ಹೇಳಿದೆ.
ರಾಜ್ಯದಲ್ಲಿ ಬೆಂಗಳೂರಿನಲ್ಲೇ ಅತ್ಯಂತ ಹೆಚ್ಚು ಸೋಂಕಿತರು ಕಂಡು ಬರುವ ಸಾಧ್ಯತೆಗಳಿದ್ದು, ಹೀಗಾಗಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕೊರೋನಾ ನಿಯಂತ್ರಣ ಕಾರ್ಯಸೂಚಿಯನ್ನು ಜಾರಿಗೆ ತರಬೇಕು ಎಂದು ಸಂಸ್ಥೆಯ ಮೈಸೂರು ಸಂಜೀವ್ ಹೇಳಿದ್ದಾರೆ.
ಜೊತೆಗೆ ಹೆಚ್ಚಿನ ಅಪಾಯದ ಗುಂಪುಗಳೆಂದು ಗುರುತಿಸಲಾಗಿರುವ ವೃದ್ಧರು ಅವರ ಸಹವರ್ತಿಗಳು, ಬಸ್ ಕಂಡಕ್ಟರ್ಗಳು, ತರಕಾರಿ ಮಾರಾಟಗಾರರು, ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರು, ಮಾರುಕಟ್ಟೆ ಮತ್ತು ಮಾಲ್ ಗಳಲ್ಲಿ ಕೆಲಸ ಮಾಡುವವರು, ಚಿಲ್ಲರೆ ಅಂಗಡಿ ವ್ಯಾಪಾರಸ್ಥರು, ಬಸ್, ರೈಲು ನಿಲ್ದಾಣದಲ್ಲಿರುವ ಮಂದಿ ಹಾಗೂ ಹೋಟೆಲ್ ಸಿಬ್ಬಂದಿ ಹೀಗೆ ಅನೇಕ ವರ್ಗದ ಮಂದಿಯ ಮೇಲೆ ನಿಗಾವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
The state government needs to have a separate strategy for Bengaluru Urban,” said Mysore Sanjeev, convener, Jeevan Raksha.
Discussion about this post