ಬೆಂಗಳೂರು : ಎಲ್ಲೂ ನ್ಯಾಯ ಸಿಗದಿದ್ರೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತದೆ ಅನ್ನುವುದು ಜನರ ನಂಬಿಕೆ. ಆಧರೆ ಇತ್ತೀಚಿನ ದಿನಗಳಲ್ಲಿ ಜನರ ನಂಬಿಕೆ ಸುಳ್ಳಾಗುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಜನ ಸಾಮಾನ್ಯರು ಹಾಗೂ ಉಳ್ಳವರನ್ನು ನಡೆಸಿಕೊಳ್ಳುವ ರೀತಿಯೇ ಇದಕ್ಕೆ ಸಾಕ್ಷಿ. ಶ್ರೀಮಂತರಿಗೊಂದು, ಬಡವರಿಗೊಂದು ನ್ಯಾಯ ಅನ್ನುವುದೇ ಖಾಕಿಗಳ ವಾದವಾಗಿದೆ. ಇದಕ್ಕೆ ಸಾಕ್ಷಿ ಒಂದೇ… ಎರಡೇ.
ಈ ನಡುವೆ ವಶಕ್ಕೆ ಪಡೆದ ವಾಹನ ಬಿಡುಗಡೆ ಮಾಡಲು ಲಂಚ ಪಡೆದಿದ್ದ ಪೊಲೀಸ್ ಪೇದೆಗೆ 4 ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಿ ಬೆಂಗಳೂರು ನಗರದ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಂದ ಹಾಗೇ ಜೈಲು ಶಿಕ್ಷೆಗೆ ಒಳಗಾಗಿರುವವರು ಚಿಕ್ಕಜಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಎಂ.ಕೆ. ಮಂಜಣ್ಣ
ನುಂಗಣ್ಣ ಖ್ಯಾತಿಯ ಮಂಜಣ್ಣ 2017ರಲ್ಲಿ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಆರೋಪ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ ಅವರ ಬೈಕ್ ಅನ್ನು ಕೂಡಾ ಜಪ್ತಿ ಮಾಡಲಾಗಿತ್ತು.
ಜಾಮೀನು ಪಡೆದ ಬಳಿಕ ವ್ಯಕ್ತಿ ಬೈಕ್ ಪಡೆಯಲು ಠಾಣೆಗೆ ಹೋದರೆ ಎಂ.ಕೆ. ಮಂಜಣ್ಣ 20 ಸಾವಿರ ಲಂಚ ಕೇಳಿದ್ದಾನೆ. ಹೀಗಾಗಿ ಬೈಕ್ ಮಾಲೀಕ ಭ್ರಷ್ಟಚಾರ ನಿಗ್ರಹ ದಳದ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಮಂಜಣ್ಣ 10 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಹಣದೊಂದಿಗೆ ಮಂಜಣ್ಣನನ್ನು ಬಂಧಿಸಿದ್ದರು,
2018ರಲ್ಲಿ ಪೊಲೀಸಪ್ಪ ಮಂಜಣ್ಣನ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಾಲಯ ಪೊಲೀಸ್ ಪೇದೆಯನ್ನು ಆರೋಪಿ ಎಂದು ಘೋಷಿಸಿದ್ದು 4 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಅನ್ನುವವನನ್ನು ಕೆಲ ದಿನಗಳ ಹಿಂದೆ ಎಸಿಬಿ ಅಧಿಕಾರಿಗಳು ಲಂಚ ಪ್ರಕರಣವೊಂದರಲ್ಲಿ ಬಂಧಿಸಿದ್ದರು ಅನ್ನುವುದನ್ನು ನೆನಪಿಸಬಹುದು. ಮಾತ್ರವಲ್ಲದೆ ರಾಘವೇಂದ್ರನಿಗಿಂತ ಮುಂಚೆ ಇನ್ಸ್ ಪೆಕ್ಟರ್ ಕೂಡಾ ಲಂಚ ತಿಂದು ನಾಪತ್ತೆಯಾಗಿದ್ದ.
Discussion about this post