ಬೆಂಗಳೂರು : ಪಾದಚಾರಿ ಮಾರ್ಗದಲ್ಲಿ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಸಂಜಯ ನಗರದ ನಂದಿನಿ ಬೂತ್ ಬಳಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಕೊಲೆಯೋ ಅನುಮಾನ ಮೂಡಿದ್ದು ಸದಾಶಿವ ನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೃತನನ್ನು RT Nagara Ganga Bakery ಬಳಿಯ ನಿವಾಸಿ 17 ವರ್ಷದ ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದೆ. ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿ ದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಬಳಿಕ 4 ಗಂಟೆಯ ಹೊತ್ತಿಗೆ ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ.
ಅದೇ ರೀತಿ ಇಂದು ಕೂಡಾ ಎದ್ದು ಕೆಲ ಹೊತ್ತು ಓದಿದ ಬಳಿಕ ವಾಕಿಂಗ್ ಗೆ ಹೊರ ಬಂದಿದ್ದಾನೆ. ಹಾಗೇ ಬಂದವನು ಮನೆಗೆ ಮರಳುವ ಬದಲು ರಸ್ತೆ ಬದಲಿಯಲ್ಲಿ ಹೆಣವಾಗಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಭಂಡಾರಿ ಪೋಷಕರು ಭಗತ್ ಸಿಂಗ್ –ಬಾಬ್ನಾ ಎಂದು ಗೊತ್ತಾಗಿದೆ. ಭಗತ್ ಸಿಂಗ್ ಉತ್ತರಾಖಂಡ ಮೂಲದವರಾಗಿದ್ದು, ಸೇನೆಯಿಂದ ನಿವೃತರಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿ 20 ವರ್ಷವಾಗಿದೆ. ನಿವೃತ್ತ ಆರ್ಮಿ ಮ್ಯಾನ್ ಆಗಿದ್ದಾರೆ. ಆರ್.ಟಿ. ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು.
Discussion about this post