ರಾಜ್ಯಾದ್ಯಂತ ಸಂಚಲನ ಮೂಡಿಸಿರುವ IMA ವಂಚನೆ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಮಾತೃಶ್ರೀ ಹಿಂದೂ ಜಾಗೃತಿ ಫೌಂಡೇಶನ್ ಸಂಸ್ಥಾಪಕ ಡಾ. ವಿನಯ್ ಗೌಡ ಜೀ ಆಗ್ರಹಿಸಿದ್ದಾರೆ.
IMA ಸಂಸ್ಥೆಯಲ್ಲಿ ಕೇವಲ ಮುಸ್ಲಿಂ ಸಮುದಾಯದ ಮಂದಿ ಮಾತ್ರ ಹಣ ಹೂಡಿಕೆ ಮಾಡಿಲ್ಲ. ಅನೇಕ ಹಿಂದೂ ಬಂಧುಗಳು ಕೂಡಾ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಒಂದು ವರ್ಗದ ಮಂದಿ ಮಾತ್ರ ಹೂಡಿಕೆ ಮಾಡಿದ್ದಾರೆ ಅನ್ನುವಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ ಹಿಂದೂಗಳಿಗೆ ಅನ್ಯಾಯವಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ಕಾರಣದಿಂದ ಮೋಸ ಹೋದ ಎಲ್ಲರಿಗೂ ಹಣ ಸಿಗುವಂತಾಗಬೇಕು. ಕೇವಲ ಒಂದು ವರ್ಗದ ಮಂದಿಯನ್ನು ಓಲೈಸುವ ಕೆಲಸವಾಗಬಾರದು ಎಂದು ಡಾ. ವಿನಯ್ ಗೌಡ ಒತ್ತಾಯಿಸಿದ್ದಾರೆ.
ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಪ್ರಕಾರ ಈ ವಂಚನೆಯ ಜಾಲದಲ್ಲಿ ರಾಜ್ಯದ ಅನೇಕ ಜನಪ್ರತಿನಿಧಿಗಳ ಹೆಸರು ಪ್ರಸ್ತಾಪವಾಗಿದೆ. ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿರುವ ಮಂದಿಯೇ ಇದರಲ್ಲಿದ್ದಾರೆ, ಅವರೇ IMA ಸಂಸ್ಥೆಯಿಂದ ಹಣ ಪಡೆದಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
ಹೀಗಾಗಿ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಸಂಸ್ಥೆ ತನಿಖೆ ನಡೆಸಿದರೆ ವಿಐಪಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ಒಪ್ಪಿಸಬೇಕು ಎಂದು ಆಗ್ರಹಿಸಿರುವ ಡಾ. ವಿನಯ್ ಗೌಡ ಅವರು, ಒಂದು ವೇಳೆ ಸರ್ಕಾರ ಅನ್ಯಾಯಕ್ಕೆ ಒಳಗಾಗಿರುವ ಜನರಿಗೆ ನ್ಯಾಯ ಕೊಡುವಲ್ಲಿ ವಿಳಂಭ ನೀತಿ ಅನುಸರಿಸಿದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
Discussion about this post