ಹರಿಯುವ ಕಾವೇರಿ, ಕೈ ಬೀಸಿ ಕರೆಯುವ ಕರಾವಳಿ, ಕರ್ನಾಟಕದ ಸೊಗಡನ್ನು ತುಂಬಿಸಿಕೊಂಡ ಉತ್ತರ ಕರ್ನಾಟಕ, ಹಸಿರು ಹೊದ್ದುಕೊಂಡಿರುವ ಮಲೆನಾಡು. ಕರ್ನಾಟಕವನ್ನು ಬಣ್ಣಿಸಲು ಸಾಲುಗಳೇ ಸಾಲದು.
ಇಂತಹ ಕರುನಾಡಿನಲ್ಲಿರುವ ಸಾಧಕರು ನೂರಾರು. ಆದರೆ ಹಲವಾರು ಸಾಧಕರು ಇನ್ನೂ ಎಲೆಮರೆ ಕಾಯಿಯಂತೆ ತಾವಾಯ್ತು, ತಮ್ಮ ಕೆಲಸವಾಯ್ತು ಎಂದಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಇದೀಗ ‘ಕನ್ನಡವೇ ನಿತ್ಯ’ ತಂಡ ಮುಂದಾಗಿದೆ. ನವೆಂಬರ್ ನಲ್ಲಿ ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಪರೂಪದ ಸಾಧಕರಿಗೆ ಗೌರವ ಸಂದಾಯವಾಗಲಿದೆ.
ಹಾಗಂತ ಈ ಸಾಧಕರನ್ನು ತಂಡವೇ ಆಯ್ಕೆ ಮಾಡುತ್ತಿಲ್ಲ. ಬದಲಾಗಿ ಸಾಧಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕನ್ನಡಿಗರಿಗೆ ನೀಡಲಾಗಿದೆ. ಹೀಗಾಗಿ ನೀವೇ ಸಾಧನೆ ಮಾಡಿರಬಹುದು, ಅಥವಾ ನಿಮಗೆ ಗೊತ್ತಿರುವ ಸಾಧಕರು ಇರಬಹುದು. ಅಂತಹ ವ್ಯಕ್ತಿಗಳ ಕಿರು ಪರಿಚಯವನ್ನು ‘ ಕನ್ನಡವೇ ನಿತ್ಯ’ ತಂಡಕ್ಕೆ ಕಳುಹಿಸಿಕೊಟ್ಟರೆ, ಆಯ್ಕೆ ಸಮಿತಿ ಅದನ್ನು ಪರಿಶೀಲನೆ ನಡೆಸುತ್ತದೆ.
ಸಾಧಕರನ್ನು ಗುರುತಿಸಲು ಈ ಲಿಂಕ್ ಕ್ಲಿಕ್ ಮಾಡಿ
ಮತ್ಯಾಕೆ ತಡ adisevents13@gmail.com ಗೆ ನಿಮಗೆ ಗೊತ್ತಿರುವ ಸಾಧಕರ ವಿವರ ಕಳುಹಿಸಿಕೊಡಿ. ಅವರು ಮಾಡಿದ ಸಾಧನೆ, ಅವರು ಯಾಕೆ ಗೌರವ ಆರ್ಹರು ಅನ್ನುವುದನ್ನು ನಿಮ್ಮ ವಿವರದಲ್ಲಿ ನಮೂದಿಸಿ.
Discussion about this post