ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳ ಟ್ರೆಂಡ್ ಗೆ ತಕ್ಕಂತೆ ಟೀಸರ್ ಮೂಡಿ ಬಂದಿದ್ದು, ಖಡಕ್ಕ್ ಡೈಲಾಗ್ ಮೂಲಕ ದರ್ಶನ್ ಇಲ್ಲಿ ವಿಜಂಭ್ರಮಿಸಿದ್ದಾರೆ.
ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆ ಪಟ್ಟು ನನ್ನ ಇಲ್ಲಿಗೆ ಕರೆಸಿಕೊಂಡಿದೆ. ಇನ್ನು ಮುಂದೆ ಅಧಿಕಾರನೂ ನನ್ನದೇ, ಆಜ್ಞೆಯೂ ನನ್ನದೇ. ನನ್ನನ್ನು ಫೇಸ್ ಮಾಡಲು ಗುಂಡಿಗೆಯಲ್ಲಿ ಧಮ್ ಇರಬೇಕು ಎಂದು ದರ್ಶನ್ ಟೀಸರ್ ನಲ್ಲಿ ಗುಡುಗಿದ್ದಾರೆ.
ಅಂದ ಹಾಗೇ ಒಡೆಯ ತಮಿಳಿನ ವೀರಂ ಚಿತ್ರದ ರೀಮೇಕ್ ಆಗಿದ್ದು, ಐವರು ಸಹೋದರರ ಪ್ರೀತಿಯ ಅಣ್ಣನ ಕಥೆಯನ್ನು ಹೊಂದಿದೆ. ಈಗಾಗಲೇ ದರ್ಶನ್ ಅಭಿನಯದ ಯಜಮಾನ, ಕುರುಕ್ಷೇತ್ರ ಚಂದನವನದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಒಡೆಯನ ಮೇಲೂ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ.
ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಚಿತ್ರ ತೆರೆಗೆ ಬರಲಿದ್ದು, ಎಂ.ಡಿ. ಶ್ರೀಧರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಎನ್. ಸಂದೇಶ ಹಣಕಾಸು ಹೊಂದಿಸಿದ್ದು ಎವಿ ಕೃಷ್ಣ ಕುಮಾರ್ ಛಾಯಾಗ್ರಹಣವಿದೆ.
Discussion about this post